Daily Horoscope

ನಟ ದರ್ಶನ್ ಗೆ ಇಂದು ಮತ್ತೊಂದು ಮಹತ್ವದ ದಿನ

Krishnaveni K
ಸೋಮವಾರ, 22 ಜುಲೈ 2024 (09:18 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ದರ್ಶನ್ ಪ್ರಕರಣದಲ್ಲಿ ಇಂದು ಕೋರ್ಟ್ ಮತ್ತೊಂದು ಮಹತ್ವದ ತೀರ್ಮಾನ ಪ್ರಕಟಿಸಲಿದೆ.

ಕಳೆದ ಒಂದು ತಿಂಗಳಿನಿಂದ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೂ ಆಗಸ್ಟ್ 1 ರವರಗೆ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ. ಆದರೆ ಐಷಾರಾಮಿ ಜೀವನಕ್ಕೆ ಒಗ್ಗಿ ಹೋಗಿದ್ದ ದರ್ಶನ್ ಗೆ ಜೈಲೂಟ ಸರಿ ಬರುತ್ತಿರಲಿಲ್ಲ.

ತಮಗೆ ಅಜೀರ್ಣವಾಗುತ್ತಿದೆ, ಜೈಲೂಟ ಒಗ್ಗುತ್ತಿಲ್ಲ, ಮನೆ ಊಟ ಕೊಡಲು ಅವಕಾಶ ಕೊಡಿ ಎಂದು ವಕೀಲರ ಮೂಲಕ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ವಿಚಾರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಇಂದು ಕೋರ್ಟ್ ದರ್ಶನ್ ಗೆ ಮನೆ ಆಹಾರ ನೀಡಬಹುದೇ ಎಂಬ ವಿಚಾರವಾಗಿ ಮಹತ್ವದ ತೀರ್ಪು ಪ್ರಕಟಿಸಲಿದೆ. ಇದಕ್ಕೆ ಮೊದಲು ಹೈಕೋರ್ಟ್ ಒಂದು ವಾರದೊಳಗಾಗಿ ಈ ವಿಚಾರವಾಗಿ ತೀರ್ಪು ಪ್ರಕಟಿಸಲು ಸೂಚಿಸಿತ್ತು. ಅದರಂತೆ ಇಂದು ಮನೆ ಊಟವೇ, ಜೈಲೂಟವೇ ಮುಂದುವರಿಯುತ್ತಾ ಎನ್ನುವುದು ಸ್ಪಷ್ಟವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಅಕುಲ್ ಬಾಲಾಜಿ ಆಂಕರ್ ಮಾಡುತ್ತಿರಬೇಕಾದರೆ ಬಾಟಲಿ ಎಸೆದ ತೆಲುಗು ನಟ ರಾಣಾ: Video

BBK13: ನಾಲಾಯಕ್ ನನ್ ಮಕ್ಳು, ಬಳೆ ತೊಟ್ಕೊಂಡು ಕೂರಿ ಎಂದ ಕಿರಣ್ ಶಾಸ್ತ್ರಿ: ಎಲ್ಲೆ ಮೀರುತ್ತಿದ್ದಾರಾ ಕಾಮನ್ ಸ್ಪರ್ಧಿಗಳು video

BBK13: ದೊಡ್ಮನೆಗೆ ಫ್ಲೈಟ್ ತಂಡ ಬಂದ ಮೇಲೆ ಸೈಲೆಂಟ್ ಆದರಾ ಗಗನ್, ತಾಂಡವ್

ಮುಂದಿನ ಸುದ್ದಿ
Show comments