ಕೊರೋನಾಗೆ ಬಲಿಯಾದ ಆತ್ಮೀಯರ ಸಾವಿನ ದುಃಖ ಹಂಚಿಕೊಂಡ ನಟ ಅನಿರುದ್ಧ್

Webdunia
ಶನಿವಾರ, 24 ಏಪ್ರಿಲ್ 2021 (10:01 IST)
ಬೆಂಗಳೂರು: ಕೊರೋನಾಗೆ ಬಲಿಯಾದ ಆತ್ಮೀಯರೊಬ್ಬರ ಸಾವಿನ ದುಃಖವನ್ನು ನಟ ಅನಿರುದ್ಧ್ ಅಭಿಮಾನಿಗಳೊಂದಿಗೆ ಹಂಚಿಕೊಂಡು ಭಾವುಕರಾಗಿದ್ದಾರೆ.


ಮೊನ್ನೆಯಷ್ಟೇ ತಮಗೆ ಅತ್ಯಂತ ಆತ್ಮೀಯರಾಗಿದ್ದವರೊಬ್ಬರು ಕೊರೋನಾದಿಂದ ತೀರಿಕೊಂಡರು. ಅವರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆ ಸಿಗದೇ ಪರದಾಡಬೇಕಾಯಿತು ಎಂದು ಅನಿರುದ್ಧ್ ಹೇಳಿದ್ದಾರೆ.

‘ನಮ್ಮ ಆತ್ಮೀಯರೊಬ್ಬರ ಸಾವಾಗಿದೆ. ನಾನೂ ಸಹಿತ ನಾವೆಲ್ಲರೂ ಆಸ್ಪತ್ರೆಗಾಗಿ ಸಾಕಷ್ಟು ಕರೆಗಳನ್ನು ಮಾಡಿದೆವು. ರೆಮ್ ಡಿಸೀವರ್ ಇಂಜಕ್ಷನ್ ಬ್ಲ್ಯಾಕ್ ನಲ್ಲಿ ಮಾರಾಟವಾಗುತ್ತಿದೆ. ಅದೂ ಸುಲಭಕ್ಕೆ ಸಿಗಲ್ಲ. ಸಾಕಷ್ಟು ಪ್ರಯತ್ನಪಡಬೇಕಾಗುತ್ತದೆ. ಅವರು ಸಾವನ್ನಪ್ಪಿದಾಗ ಅಂತ್ಯಸಂಸ್ಕಾರ ಮಾಡಲು ಬನಶಂಕರಿ ಚಿತಾಗಾರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಆಗಲೇ 40 ಆಂಬ್ಯುಲೆನ್ಸ್ ಗಳು ಕ್ಯೂನಲ್ಲಿದ್ದವು. ಹೀಗಾಗಿ ಕೆಂಗೇರಿಗೆ ಬಂದರು. ಅಲ್ಲಿ ಅವರಿಗೆ 17 ನೇ ನಂಬರ್ ಟೋಕನ್ ಸಿಕ್ಕಿತು. ನಾನು ಅಭಿಮಾನಿಗಳಲ್ಲಿ ಕೋರುವುದು ಇಷ್ಟೇ. ದಯವಿಟ್ಟು ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಸುರಕ್ಷತೆಯಲ್ಲಿ ನೀವಿರಿ’ ಎಂದು ಅನಿರುದ್ಧ್ ಭಾವುಕರಾಗಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಮುಂದಿನ ಸುದ್ದಿ
Show comments