Webdunia - Bharat's app for daily news and videos

Install App

ಥಿಯೇಟರ್ ನಿಂದ ‘ರಾಮಾರ್ಜುನ’ ಎತ್ತಂಗಡಿ: ಬೇಸರ ಹೊರಹಾಕಿದ ಅನೀಶ್

Webdunia
ಶುಕ್ರವಾರ, 5 ಫೆಬ್ರವರಿ 2021 (10:27 IST)
ಬೆಂಗಳೂರು: ಹೊಸಬರ ಸಿನಿಮಾಗಳು ಥಿಯೇಟರ್ ನಲ್ಲಿ ಹೆಚ್ಚು ಕಾಲ ಬಾಳಿಕೆ ಬರಲ್ಲ. ಅದನ್ನು ಎರಡನೇ ವಾರಕ್ಕೇ ಎತ್ತಂಗಡಿ ಮಾಡಲಾಗುತ್ತದೆ. ಈ ರೀತಿ ಹಲವು ಬಾರಿ ಹೊಸ ತಂಡಕ್ಕೆ ಅನುಭವ ಅಗಿದ್ದುಂಟು. ಈಗ ರಾಮಾರ್ಜುನ ಸಿನಿಮಾ ತಂಡವೂ ಅಂತಹದ್ದೇ ಸಂಕಷ್ಟ ಎದುರಿಸುತ್ತಿದೆ.


ಅನೀಶ್ ನಿರ್ದೇಶಿಸಿ, ನಟಿಸಿರುವ ರಾಮಾರ್ಜುನ ಸಿನಿಮಾ ಕಳೆದ ವಾರ ತೆರೆಕಂಡಿತ್ತು. ಹೊಸಬರ ಸಿನಿಮಾವಾದರೂ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಆದರೆ ಈಗ ಎರಡನೇ ವಾರಕ್ಕೇ ಹಲವು ಚಿತ್ರಮಂದಿರಗಳಿಂದ ಸಿನಿಮಾ ತೆಗೆದುಹಾಕಲಾಗಿದೆ. ಇದು ಅನೀಶ್ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬೇಸರ ಹೊರಹಾಕಿದ್ದಾರೆ. ‘ನನ್ನ ಸಿನಿಮಾಗೆ ಇದೇ ಮೊದಲ ಬಾರಿಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ನಾನೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಎಂದು ಖುಷಿಯಲ್ಲಿದ್ದೆ. ಆದರೆ ಈಗ ಎರಡನೇ ವಾರದ ಲಿಸ್ಟ್ ನೋಡುತ್ತಿದ್ದರೆ ಹಲವು ಚಿತ್ರಮಂದಿರಗಳಿಂದ ಸಿನಿಮಾ ಕಿತ್ತು ಹಾಕಲಾಗಿದೆ. ದಯವಿಟ್ಟು ನಮ್ಮಂತಹ ಹೊಸಬರ ಸಿನಿಮಾವನ್ನು ಪ್ರೋತ್ಸಾಹಿಸಿ. ಮುಂದಿನ ವಾರ ನೋಡೋಣ ಎಂದು ಕಾದರೆ ಆ ಸಿನಿಮಾ ಅಲ್ಲಿರುತ್ತೋ ಇಲ್ವೋ ಎನ್ನುವ ಗ್ಯಾರಂಟಿ ಇಲ್ಲ. ಇಂದೇ ಹೋಗಿ ನೋಡಿ ನಮ್ಮ ಸಿನಿಮಾವನ್ನು ಗೆಲ್ಲಿಸಿ’ ಎಂದು ಅನೀಶ್ ಬೇಸರದಿಂದಲೇ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments