Publish Date: Mon, 29 Nov 2021 (17:39 IST)
Updated Date: Mon, 29 Nov 2021 (17:46 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ ಒಂದು ತಿಂಗಳು. ಕಳೆದ ಒಂದು ತಿಂಗಳಿನಿಂದ ಜೀ ಕನ್ನಡ ಕಾರ್ಯಕ್ರಮ ಬಿಟ್ಟರೆ ಸಾಮಾಜಿಕ ಜಾಲತಾಣದಿಂದ ದೂರವೇ ಇದ್ದಿದ್ದ ಆಂಕರ್ ಅನುಶ್ರೀ ಇಂದು ವಿಶೇಷ ಸಂದೇಶ ಬರೆದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಭಾವುಕ ಸಂದೇಶವನ್ನು ಬೆಳಿಗ್ಗೆಯೇ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದ ಅನುಶ್ರೀ ಬಳಿಕ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ.
ಪುನೀತ್ ರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಕಳೆದ ಒಂದು ತಿಂಗಳಿನಿಂದ ಅವರ ಅಗಲುವಿಕೆಯ ನೋವಿನಿಂದಾಗಿ ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು. ಇದೀಗ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿ ಇನ್ನು, ಮುಂದಿನ ದಿನಗಳಲ್ಲಿ ಸಹಜ ಬದುಕಿಗೆ ಮರಳುವ ಸೂಚನೆ ನೀಡಿದ್ದಾರೆ.