Webdunia - Bharat's app for daily news and videos

Install App

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

Krishnaveni K
ಶುಕ್ರವಾರ, 4 ಜುಲೈ 2025 (14:40 IST)
ಬೆಂಗಳೂರು: ಅಮೃತಧಾರೆ ಧಾರವಾಹಿ ಈಗ ರೋಚಕ ಘಟ್ಟಕ್ಕೆ ಬಂದಿದ್ದು ನಾಯಕಿ ಭೂಮಿಕಾಗೆ ಡೆಲಿವರಿ ಮಾಡಿಸಲು ಜೀ ವಾಹಿನಿಯ ಎಲ್ಲಾ ಹೀರೋಗಳು ಬಂದಿದ್ದಾರೆ. ಈ ಒಂದು ಪ್ರೋಮೋ ಹೊರಬೀಳುತ್ತಿದ್ದಂತೇ ವೀಕ್ಷಕರ ಕಾಮೆಂಟ್ ನೋಡದರೆ ಮಾತ್ರ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ನ ಹೊಸ ಪ್ರೋಮೋ ಒಂದು ಹೊರಬಂದಿದೆ. ಇದರಲ್ಲಿ ತುಂಬಿ ಗರ್ಭಿಣಿ ಭೂಮಿಕಾಗೆ ಕೇಡಿ ಶಕುಂತಲಾ ನೀಡುವ ವಿಷದಿಂದಾಗಿ ಜಾಂಡೀಸ್ ಬಂದಿರುತ್ತದೆ. ಇದನ್ನು  ಗುಣಪಡಿಸಲು ಅಜ್ಜಿ ಕಾಡಿಗೆ ಹೋಗಿ ನಾಟಿ ಔಷಧ ಮಾಡಿಸಲು ಹೊರಟಿರುತ್ತಾರೆ.

ದಾರಿ ಮಧ್ಯೆ ಜಯದೇವ್ ಕಳುಹಿಸಿದ ಗೂಂಡಾಗಳು ಅಟ್ಯಾಕ್ ಮಾಡುತ್ತಾರೆ. ಈ ವೇಳೆ ಭೂಮಿಕಾಗೆ ಹೆರಿಗೆ ನೋವು ಬರುತ್ತದೆ. ಕಾಡಿನಲ್ಲಿ ಹೆರಿಗೆ ಮಾಡಿಸಲು ಕರ್ಣ ಧಾರವಾಹಿಯ ಹೀರೋ ಡಾ ಕರ್ಣ, ಅಣ್ಣಯ್ಯ ಧಾರವಾಹಿ ನಾಯಕಿ ಡಾ ಪಾರ್ವತಿ ಬರುತ್ತಾರೆ. ಗೂಂಡಾಗಳ ಜೊತೆ ಗೌತಮ್ ಗೆ ಹೊಡೆದಾಡಲು ಅಣ್ಣಯ್ಯ ನೆರವಾಗುತ್ತಾನೆ.

ಇಂತಹದ್ದೊಂದು ಪ್ರೋಮೋ ಬಿಡುತ್ತಿದ್ದಂತೇ ವೀಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದು ಟ್ರೋಲ್ ಮಾಡಿದ್ದಾರೆ. ಈ ಕಾಲದಲ್ಲೂ ಜಾಂಡೀಸ್ ಬಂದರೆ ಕಾಡಿಗೆ ಟ್ರೀಟ್ ಮೆಂಟ್ ಕೊಡಿಸಲು ಹೋಗಬೇಕಾ? ಅಬ್ಬಾ ಯಾವ ಕಾಲದಲ್ಲಿದ್ದಾರೆ ಇವರು ಎಂದು ಒಬ್ಬರು ಕಾಲೆಳೆದರೆ ಮತ್ತೆ ಕೆಲವರು ಅಂತೂ ನಾವು ಅಂದುಕೊಂಡಿದ್ದು ನಿಜವಾಯಿತು. ಭೂಮಿಕಾಗೆ ಡೆಲಿವರಿ ಮಾಡಿಸಲು ಡಾ ಕರ್ಣನೇ ಬರಬೇಕಾಯಿತು ಎಂದು ಕೆಲವರು ಹೇಳಿದ್ದಾರೆ. ಒಬ್ಬರಂತೂ ಡಾ ಕರ್ಣನೇ ಹೆರಿಗೆ ಮಾಡಿಸಲು ಸರಿ.. ಅವನಂತೂ ರೋಡ್ ನಲ್ಲೂ ಹೆರಿಗೆ ಮಾಡಿಸ್ತಾನೆ ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಜತೆಗಿನ ಮುನಿಸಿನ ಬಗ್ಗೆ ಓಪನ್ ಆಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್‌

ದರ್ಶನ್ ಬಗ್ಗೆ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಕೊಟ್ರು ಖಡಕ್ ರಿಪ್ಲೈ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಮುಂದಿನ ಸುದ್ದಿ
Show comments