Select Your Language

Notifications

webdunia
webdunia
webdunia
webdunia

ಅಂಬರೀಶ್ ಸಮಾಧಿಯಲ್ಲಿ ಇಂದು ಕುಟುಂಬಸ್ಥರಿಂದ ಮೂರನೇ ದಿನದ ಕಾರ್ಯ

ಅಂಬರೀಶ್ ಸಮಾಧಿಯಲ್ಲಿ ಇಂದು ಕುಟುಂಬಸ್ಥರಿಂದ ಮೂರನೇ ದಿನದ ಕಾರ್ಯ
ಬೆಂಗಳೂರು , ಬುಧವಾರ, 28 ನವೆಂಬರ್ 2018 (09:27 IST)
ಬೆಂಗಳೂರು: ಶನಿವಾರ ನಿಧನರಾದ ಹಿರಿಯ ನಟ ಅಂಬರೀಶ್ ಸಮಾಧಿಯಲ್ಲಿ ಇಂದು ಕುಟುಂಬಸ್ಥರು ಹಾಲು ತುಪ್ಪ ಬಿಡುವ ಕಾರ್ಯಕ್ರಮ ಮತ್ತು ಚಿತಾಭಸ್ಮ ಸಂಗ್ರಹ ಮಾಡಲಿದ್ದಾರೆ.


ಅಂಬರೀಶ್ ಚಿತಾಭಸ್ಮವನ್ನು ಶ್ರೀರಂಗಪಟ್ಟಣದಲ್ಲಿ ವಿಸರ್ಜಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಹೀಗಾಗಿ ಇಂದು ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಸೇರಿದಂತೆ ಕುಟುಂಬಸ್ಥರು, ಆಪ್ತರು ಬಂದು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಬಳಿ ಮೂರನೇ ದಿನದ ಕಾರ್ಯ ನೆರವೇರಿಸಲಿದ್ದಾರೆ.

ನಿನ್ನೆಯೂ ಅಂಬರೀಶ್ ಸಮಾಧಿ ನೋಡಲು ಅಭಿಮಾನಿಗಳು ಸಾಲುಗಟ್ಟಿ ಆಗಮಿಸಿದ್ದರು. ನಿನ್ನೆ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಆಪ್ತರು ಅಂಬಿ ಸಮಾಧಿಗೆ ಭೇಟಿ ನೀಡಿದ್ದರು.

 ಈ ನಡುವೆ ಸರ್ಕಾರ ನಿರ್ಮಿಸಲುದ್ದೇಶಿಸಿರುವ ಅಂಬರೀಶ್ ಸಮಾಧಿ ನಿರ್ಮಾಣ ಕೆಲಸಗಳು ಭರದಿಂದ ಸಾಗಿದ್ದು, ಈಗಾಗಲೇ ನೀಲ ನಕ್ಷೆ ತಯಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸಮಾಧಿ ನಿರ್ಮಿಸಲಾಗುವುದು ಎಂದು ಈಗಾಗಲೇ ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ ಸಿಲುಕಿಕೊಂಡ 'ಮನಸೆಲ್ಲಾ ನೀನೆ' ಚಿತ್ರದ ನಟಿ ಗಾಯತ್ರಿ ರಘುರಾಂ