Select Your Language

Notifications

webdunia
webdunia
webdunia
Sunday, 2 March 2025
webdunia

ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ತಿರಸ್ಕರಿಸಿದ್ದರ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಶ್ರೀದೇವಿ

ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ ತಿರಸ್ಕರಿಸಿದ್ದರ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಶ್ರೀದೇವಿ
Mumbai , ಶುಕ್ರವಾರ, 9 ಜೂನ್ 2017 (09:38 IST)
ಮುಂಬೈ: ಬಾಹುಬಲಿ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಮಹಾರಾಣಿ ಶಿವಗಾಮಿ ಪಾತ್ರಕ್ಕೆ ಮೊದಲ ಆಯ್ಕೆ ರಮ್ಯಾ ಕೃಷ್ಣ ಆಗಿರಲಿಲ್ಲ. ಬಾಲಿವುಡ್ ನಟಿ ಶ್ರೀದೇವಿಗೆ ನಿರ್ದೇಶಕ ರಾಜಮೌಳಿ ಈ ಪಾತ್ರ ನಿಭಾಯಿಸುವಂತೆ ಕೇಳಿಕೊಂಡಿದ್ದರು ಎಂಬುದು ಭಾರೀ ಸುದ್ದಿಯಾಗಿತ್ತು.

 
ಶ್ರೀದೇವಿ ಯಾಕೆ ಇಂತಹ ಅದ್ಭುತ ಪಾತ್ರವನ್ನು ತಿರಸ್ಕರಿಸಿದರು? ಎಂದು ಅಭಿಮಾನಿಗಳಿಂದ ಹಿಡಿದು ಖ್ಯಾತ ಸಿನಿಮಾ ನಿರ್ದೇಶಕರವರೆಗೂ ಎಲ್ಲರೂ ಪ್ರಶ್ನಿಸಿದ್ದರು. ಇದೀಗ ಸ್ವತಃ ಶ್ರೀದೇವಿ ಅದರ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಅದಾಗ  ತಾನೇ ತಮಿಳಿನ ಪುಲಿ ಚಿತ್ರದಲ್ಲಿ ಐತಿಹಾಸಿಕ ಪಾತ್ರ ಮಾಡಿದ್ದರು ಶ್ರೀದೇವಿ. ಆದರೆ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಬಹುಶಃ ಇದೇ ಕಾರಣಕ್ಕೋ ಏನೋ, ಅವರು ಮತ್ತೆ ಅಂತಹ ಪಾತ್ರ ತಿರಸ್ಕರಿಸಿದರು.

ನಂತರ ಆ ಪಾತ್ರವನ್ನು ರಮ್ಯ ಕೃಷ್ಣ ಮಾಡಿ ಜನಮೆಚ್ಚುಗೆಗೆ ಪಾತ್ರರಾದರು. ಚಿತ್ರವನ್ನೂ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ. ‘ಇಂತಹ ಸಮಯದಲ್ಲಿ ನಾನ್ಯಾಕೆ ಆ ಪಾತ್ರ ನಿರ್ವಹಿಸಲಿಲ್ಲ ಎಂದು ಚರ್ಚೆಗಳಾಗುವ ಅಗತ್ಯವಿದೆಯೇ? ನನ್ನ ಬದಲಿಗೆ ಇನ್ನೊಬ್ಬ ನಟಿ ಆ ಪಾತ್ರ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ಶ್ರೀದೇವಿ ಪ್ರತಿಕ್ರಿಯೆ ನೀಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಗಾಯಕ ಹಿಮೇಶ್ ರಶ್ಮಿಯ-ಕೋಮಲ್ ವಿಚ್ಛೇಧನ