Publish Date: Sun, 20 Sep 2020 (10:42 IST)
Updated Date: Sun, 20 Sep 2020 (10:44 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಬಾಲಿವುಡ್ ನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.
ನಟನ ಸಾವಿಗೆ ನೆಪೋಟಿಸಂ ಕಾರಣ ಎಂದು ಅಭಿಮಾನಿಗಳು ವಾದಿಸಿದರೆ, ಮತ್ತೊಂದಿಷ್ಟು ಮಂದಿ ಭೂಗತ ಲೋಕದ ಮಾಫಿಯಾದಿಂದಾಗಿ ಯುವ ನಟನ ಹತ್ಯೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದರು.
ಈ ನಡುವೆ ಸುಶಾಂತ್ ಸಿಂಗ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಮತ್ತೊಂದೆಡೆ ಇಡಿ, ಎನ್ ಸಿ ಬಿ ಕೇಸ್ ದಾಖಲಿಸಿಕೊಂಡು ಹಲವರನ್ನು ವಶಕ್ಕೆ ಪಡೆದುಕೊಂಡಿವೆ.
ಏಮ್ಸ್ ವೈದ್ಯರ ತಂಡವು ವರದಿ ನೀಡಲಿದ್ದು, ವೈದ್ಯಕೀಯ ವರದಿಯಿಂದಾಗಿ ಸುಶಾಂತ್ ಸಾವಿನ ಸತ್ಯ ಬಹಿರಂಗವಾಗಲಿದೆ.
Jagadeesh
Publish Date: Sun, 20 Sep 2020 (10:42 IST)
Updated Date: Sun, 20 Sep 2020 (10:44 IST)