Select Your Language

Notifications

webdunia
webdunia
webdunia
webdunia

ಸಿಂಗಾಪುರ್ ಗೆ ಹಾರಿದ ನಟ ಸಂಜಯ್ ದತ್ ?

ಸಿಂಗಾಪುರ್ ಗೆ ಹಾರಿದ ನಟ ಸಂಜಯ್ ದತ್ ?
ಮುಂಬೈ , ಗುರುವಾರ, 20 ಆಗಸ್ಟ್ 2020 (16:13 IST)
ಬಾಲಿವುಡ್ ಪಾಲಿಗೆ ಈ ವರ್ಷ ಕೆಟ್ಟ ಸುದ್ದಿಗಳನ್ನೇ ತರುತ್ತಿದೆ.


ನಟರಾದ ಇರ್ಫಾನ್, ರಿಷಿ ಕಪೂರ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರಂತಹ ಅದ್ಭುತ ಪ್ರತಿಭೆಗಳನ್ನು ನಾವು ಕಳೆದುಕೊಂಡಿದ್ದೇವೆ.

ಈಗ ಬಾಲಿವುಡ್ ನಟ ಸಂಜಯ್ ದತ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅವರು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹಾರಲಿದ್ದಾರೆ ಎನ್ನಲಾಗುತ್ತಿದೆ.

ಸಧ್ಯ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಅಲ್ಲಿ ಅವರು ತಮ್ಮ ಸಹೋದರಿಯರಾದ ಪ್ರಿಯಾ ಮತ್ತು ನಮ್ರತಾ ದತ್ ಅವರೊಂದಿಗೆ ತೆರಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಸಂಜಯ್ ದತ್ ಬೇಗ ಗುಣಮುಖರಾಗಲಿದ್ದಾರೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಪ್ರಭಾಸ್ – ದೀಪಿಕಾ ಪಡುಕೋಣೆ ಚಿತ್ರದಲ್ಲಿ ರಜನಿಕಾಂತ್ ?