Webdunia - Bharat's app for daily news and videos

Install App

ತಮ್ಮನ್ನು ಮೆರೆಸುವವರಿಂದಲೇ ಮೋಸ ಹೋದರಾ ದರ್ಶನ್

Krishnaveni K
ಮಂಗಳವಾರ, 11 ಜೂನ್ 2024 (16:48 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದು, ಪೊಲೀಸರ ಮುಂದೆ ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಾನು ಶೆಡ್ ಬಳಿ ಆತನನ್ನು ನೋಡಲು ಹೋಗಿದ್ದು ನಿಜ. ಆತ ಯಾರು ಎಂದು ತಿಳಿಯಲು ಹೋಗಿದ್ದೆ ಅಷ್ಟೇ. ಬಳಿಕ ನಾನು ಅಲ್ಲಿಂದ ವಾಪಸ್ ಬಂದೆ. ಮತ್ತೆ ಅಲ್ಲಿ ಏನಾಯ್ತು ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ. ನಾನು ನನ್ನ ಹುಡುಗರಿಗೆ ಸ್ವಲ್ಪ ಹೆದರಿಸಲು ಹೇಳಿ ಬಂದಿದ್ದೆ ಎಂದಿದ್ದಾರೆ.

ನಟ ದರ್ಶನ್ ಸುತ್ತಾ ಆತ್ಮೀಯರ ಬಳಗವೇ ಇರುತ್ತದೆ. ಇವರಿಂದಲೇ ದರ್ಶನ್ ಪದೇ ಪದೇ ವಿವಾದಕ್ಕೊಳಗಾಗುತ್ತಿರುವುದೂ ಸುಳ್ಳಲ್ಲ. ಈ ಹಿಂದೆ ಮಹಿಳೆಗೆ ನಾಯಿ ಕಚ್ಚಿದ ಪ್ರಕರಣದಲ್ಲಿ, ನವರಸನಾಯಕ ಜಗ್ಗೇಶ್ ಗೆ ಬೆದರಿಕೆ ಹಾಕಿದ ಪ್ರಕರಣದಲ್ಲೂ ಸಂಗಡಿಗರಿಂದಲೇ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು.

ತಮ್ಮ ಬಾಸ್, ಅಣ್ಣ ಎಂದು ಹೇಳಿಕೊಂಡು ಓಡಾಡುವ ದರ್ಶನ್ ಆಪ್ತರು ಅವರಿಗಾಗಿ ಏನೂ ಮಾಡಲು ಸಿದ್ಧರಿರುತ್ತಾರೆ. ಆದರೆ ಅವರ ಮೇಲಿನ ಅತಿಯಾದ ಅಭಿಮಾನದಿಂದಲೇ ಅವರಿಗೆ ತೊಂದರೆ ತಂದಿಡುತ್ತಿದ್ದಾರೆ ಎಂದರೂ ಸುಳ್ಳಲ್ಲ. ಈಗಲೂ ಅದೇ ರೀತಿ ಆಗಿರಬಹುದೇ ಎಂಬ ಅನುಮಾನ ಕಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments