Webdunia - Bharat's app for daily news and videos

Install App

ಧನ್ವೀರ್ ಮಾತನಾಡಿಸಲು ಸಪ್ಪೆ ಮುಖದಲ್ಲೇ ಹೊರಬಂದ ನಟ ದರ್ಶನ್

Sampriya
ಸೋಮವಾರ, 14 ಅಕ್ಟೋಬರ್ 2024 (16:53 IST)
ಬಳ್ಳಾರಿ: ಇಂದು ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್ ಅವರು ಭೇಟಿಗೆ ಬಂದ ನಟ ಧನ್ವೀರ್, ಸುಶಾಂತ್ ಅವರನ್ನು ಮಾತನಾಡಿಸಲು ಸೆಲ್‌ನಿಂದ ಸಪ್ಪೆ ಮುಖದಲ್ಲೇ ಹೊರಬಂದಿದ್ದಾರೆ.

ಕಳೆದ ಬಾರಿ ಸೆಲ್‌ನಿಂದ ದರ್ಶನ್ ಹೊರಬರುತ್ತಿದ್ದ ಹಾಗೇ ಡಿಬಾಸ್ ಡಿಬಾಸ್ ಎಂದು ಅಭಿಮಾನಿಗಳು ಘೋಷಣೆ ಕೂಗಿದಾಗ, ನಗುತ್ತಲೇ ದರ್ಶನ್ ಎದೆ ಮುಟ್ಟಿ, ನೀವು ಹೃದಯದಲ್ಲಿದ್ದೀರಿ ಎಂದು ಸನ್ನೆ ಮಾಡಿದ್ದರು. ಆದರೆ ಈ ಬಾರಿ ದರ್ಶನ್ ಮುಖದಲ್ಲಿ ಅಷ್ಟೇನೂ ನಗು ಇರಲಿಲ್ಲ.

ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ವಾದ ವಿವಾದ ಅಂತ್ಯಗೊಂಡಿದ್ದು, ಕೋರ್ಟ್‌ ತೀರ್ಪನ್ನು ಇಂದಿಗೆ ಕಾಯ್ದಿರಿಸಿದೆ. ಇನ್ನು ದರ್ಶನ್‌ಗೆ ಜಾಮೀನು ಸಿಗುವ ನಿರೀಕ್ಷೆ ಹಿನ್ನೆಲೆ ಅವರ ನೂರಾರು ಅಭಿಮಾನಿಗಳು ಬಳ್ಳಾರಿ ಜೈಲು ಮುಂದೆ ಜಮಾಯಿಸಿದ್ದಾರೆ. ದರ್ಶನ್ ಪರ ಘೋಷಣೆ ಕೂಗುತ್ತಾ, ಬಾಸ್‌ಗೆ ಜಾಮೀನು ಪಕ್ಕಾ ಎನ್ನುತ್ತಿದ್ದಾರೆ.

ಇದರ ಬೆನ್ನಲ್ಲೇ ದರ್ಶನ್ ಅವರನ್ನು ಮಾತನಾಡಿಸಲು ಧನ್ವೀರ್ ಅವರು ಬಂದಿದ್ದಾರೆ. ದರ್ಶನ್‌ಗೆ ಒಂದು ಬ್ಯಾಗ್‌ನಲ್ಲಿ ಬಟ್ಟೆ, ಬಿಸ್ಕೆಟ್, ಡ್ರೈ ಪ್ರೂಟ್ಸ್‌ ಅನ್ನು ತಂದಿದ್ದಾರೆ. ಇನ್ನೂ ಧನ್ವೀರ್ ಕಾರಿನಿಂದ ಇಳಿಯುತ್ತಿದ್ದ ಹಾಗೇ ಡಿಬಾಸ್, ಡಿಬಾಸ್ ಎಂದು ಫ್ಯಾನ್ಸ್‌ಗೆ ಘೋಷಣೆ ಕೂಗಿದ್ದಾರೆ.  ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಅಭಿಮಾನಿಗಳನ್ನು ಚದುರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments