Webdunia - Bharat's app for daily news and videos

Install App

ರಶ್ಮಿಕಾ ಮಂದಣ್ಣಗೆ ಈ ಕಾರಣಕ್ಕೆ ಥ್ಯಾಂಕ್ಸ್ ಹೇಳಿದ ಚಿಕ್ಕಣ್ಣ

Krishnaveni K
ಗುರುವಾರ, 8 ಫೆಬ್ರವರಿ 2024 (10:02 IST)
ಬೆಂಗಳೂರು: ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ, ಕನ್ನಡ ಮರೆತಿದ್ದಾರೆ ಎಂದು ಎಲ್ಲರೂ ದೂರಬಹುದು. ಆದರೆ ಇದೀಗ ನಟ ಚಿಕ್ಕಣ್ಣ ತಮ್ಮ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾರನ್ನು ನೆನೆದು ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.

ಚಿಕ್ಕಣ್ಣ ನಾಯಕರಾಗಿ ಅಭಿನಯಿಸಿದ್ದ ಉಪಾಧ‍್ಯಕ್ಷ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾ ಸಕ್ಸಸ್ ಪಾರ್ಟಿಯನ್ನು ಚಿತ್ರತಂಡ ಆಯೋಜಿಸಿತ್ತು. ಸಕ್ಸಸ್ ಪಾರ್ಟಿಯಲ್ಲಿ ಚಿಕ್ಕಣ್ಣ ತಮ್ಮ ಸಿನಿಮಾ ವಿಕ್ಷಿಸಿದ ಫ್ಯಾನ್ಸ್, ಶುಭ ಕೋರಿದ ಸ್ಟಾರ್ ಕಲಾವಿದರಿಗೆಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ರಶ್ಮಿಕಾರನ್ನು ಸ್ಮರಿಸಿಕೊಂಡಿದ್ದಾರೆ.

ರಶ್ಮಿಕಾರನ್ನು ನೆನೆಸಿಕೊಂಡಿದ್ದೇಕೆ ಚಿಕ್ಕಣ್ಣ?
ಉಪಾಧ್ಯಕ್ಷ ಸಿನಿಮಾಗೆ ಯಶಸ್ಸು ಕೋರಿ ಅನೇಕ ಕಲಾವಿದರು ವಿಡಿಯೋ ಬೈಟ್ ಕೊಟ್ಟಿದ್ದರು. ಆ ಪೈಕಿ ರಶ್ಮಿಕಾ ಕೂಡಾ ಒಬ್ಬರು. ಉಪಾಧ್ಯಕ್ಷ ಸಿನಿಮಾ ಬಗ್ಗೆ ವಿಡಿಯೋ ಬೈಟ್ ಕೊಟ್ಟಿದ್ದ ರಶ್ಮಿಕಾ, ಇಡೀ ತಂಡ ಕಷ್ಟಪಟ್ಟು ಕೆಲಸ ಮಾಡಿದೆ. ಸಿನಿಮಾಗೆ ಯಶಸ್ಸು ಸಿಕ್ಕಲಿ ಎಂದು ಹಾರೈಸಿದ್ದರು. ಇದೇ ಕಾರಣಕ್ಕೆ ರಶ್ಮಿಕಾಗೆ ಚಿಕ್ಕಣ್ಣ ಸಕ್ಸಸ್ ಪಾರ್ಟಿಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಕೇವಲ ರಶ್ಮಿಕಾ ಮಾತ್ರವಲ್ಲ ಈ ಸಿನಿಮಾ ಶೂಟಿಂಗ್ ಹಂತದಲ್ಲಿರುವಾಗಲೇ ಶಿವಣ್ಣ ಸೆಟ್ ಗೆ ಬಂದು ಶುಭ ಕೋರಿದ್ದರು. ಡಿ ಬಾಸ್ ದರ್ಶನ್, ಯಶ್, ರಿಷಬ್ ಶೆಟ್ಟಿ, ಉಪೇಂದ್ರ, ಡಾಲಿ ಧನಂಜಯ ಸೇರಿದಂತೆ ಅನೇಕ ಕಲಾವಿದರು ಚಿಕ್ಕಣ್ಣ ಸಿನಿಮಾಗೆ ಶುಭ ಕೋರಿ ವಿಡಿಯೋ ತುಣುಕು ಹಂಚಿಕೊಂಡಿದ್ದರು. ಇದರಿಂದ ಚಿತ್ರದ ಪ್ರಚಾರಕ್ಕೆ ಅನುಕೂಲವಾಯಿತು.

ಹೀಗಾಗಿ ಈ ಸ್ಟಾರ್ ನಟರಿಗೆಲ್ಲರಿಗೂ ಚಿಕ್ಕಣ್ಣ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಎಲ್ಲರ ಹಾರೈಕೆಯಿಂದಲೇ ಈ ಯಶಸ್ಸು ಸಿಕ್ಕಿದೆ. ಎಲ್ಲರ ಬಳಿಯೂ ನನಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಿದ್ದರಿಂದ ಪ್ರೀತಿಯಿಂದ ವಿಡಿಯೋ ಬೈಟ್ ಕೊಟ್ಟರು. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ಚಿಕ್ಕಣ್ಣ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments