Select Your Language

Notifications

webdunia
webdunia
webdunia
webdunia

ಭಾರತಿ ವಿಷ್ಣುವರ್ಧನ್ ‘ಬಾಳೆ ಬಂಗಾರ’ ಸಾಕ್ಷ್ಯ ಚಿತ್ರದಲ್ಲಿ ದಿಗ್ಗಜ ನಟರು

ಭಾರತಿ ವಿಷ್ಣುವರ್ಧನ್ ‘ಬಾಳೆ ಬಂಗಾರ’ ಸಾಕ್ಷ್ಯ ಚಿತ್ರದಲ್ಲಿ ದಿಗ್ಗಜ ನಟರು
ಬೆಂಗಳೂರು , ಸೋಮವಾರ, 16 ಆಗಸ್ಟ್ 2021 (09:46 IST)
ಬೆಂಗಳೂರು: ಹಿರಿಯ ನಟಿ, ಪದ್ಮ ಪ್ರಶಸ್ತಿ ಪುರಸ್ಕೃತೆ ಭಾರತಿ ವಿಷ್ಣುವರ್ಧನ್ ಕುರಿತಾದ ಸಾಕ್ಷ್ಯ ಚಿತ್ರ ‘ಬಾಳೆ ಬಂಗಾರ’ ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಟ್ರೈಲರ್ ಲಾಂಚ್ ಆಗಿದೆ.

 

ಈ ಸಾಕ್ಷ್ಯ ಚಿತ್ರವನ್ನು ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಪರಿಕಲ್ಪನೆ, ಸಂಶೋಧನೆ, ನಿರೂಪಣೆ, ನಿರ್ದೇಶನ ಮಾಡಿ, ಕೀರ್ತಿ ಇನ್ನೋವೇಶ್ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ.

ಈ ಸಾಕ್ಷ್ಯ ಚಿತ್ರದ ಟ್ರೈಲರ್ ನಿನ್ನೆ ಭಾರತಿ ವಿಷ್ಣುವರ್ಧನ್ ಜನ್ಮದಿನ ನಿಮಿತ್ತ ಬಿಡುಗಡೆಯಾಗಿದೆ. ಇದರಲ್ಲಿ ಭಾರತಿ ವಿಷ್ಣುವರ್ಧನ್ ಬಗ್ಗೆ ಹಿರಿಯ ನಟ ಶಿವರಾಂ, ನಿರ್ದೇಶಕ ಭಗವಾನ್, ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಭಾರತಿ ವಿಷ್ಣುವರ್ಧನ್ ಜೊತೆ ನಟಿಸಿದ ಅನೇಕ ದಿಗ್ಗಜ ಕಲಾವಿದರು, ತಂತ್ರಜ್ಞರು ಅವರ ಕುರಿತಾದ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ ಅವರ ಯಶಸ್ಸಿನ ಹಿಂದಿರುವ ಶಕ್ತಿ ಭಾರತಿ ವಿಷ್ಣುವರ್ಧನ್ ಎಂದರೂ ತಪ್ಪಾಗಲಾರದು. ಅವರ ಬದುಕಿನ ಕತೆ ತಿಳಿಯಬೇಕಾದರೆ ಈ ಸಾಕ್ಷ್ಯ ಚಿತ್ರ ನೋಡಲೇಬೇಕು.

ಈ ಸಾಕ್ಷ್ಯ ಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಜೀವನ ಕತೆ, ಅವರು ಅನುಭವಿಸಿದ ಕಷ್ಟಗಳು, ಯಶಸ್ಸು, ಸಾಹಸಸಿಂಹ ವಿಷ್ಣುವರ್ಧನ್ ಪತ್ನಿಯಾಗಿ ಅವರ ಜೀವನದ ಕತೆಯನ್ನು ಹೇಳಲಾಗಿದೆ. ಇದಕ್ಕೆ ಸಂಗೀತ ಸಂಯೋಜಿಸಿರುವುದು ಗುರುಕಿರಣ್. ಇದೇ ತಿಂಗಳು ಇದನ್ನು ಬಿಡುಗಡೆ ಮಾಡಲು ಅನಿರುದ್ಧ್ ತಯಾರಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಗಣಮನ ಕರೆಕ್ಟ್ ಆಗಿ ಹಾಡಿ ಎಂದ ನೆಟ್ಟಿಗನಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ