Publish Date: Sat, 13 Feb 2021 (11:00 IST)
Updated Date: Sat, 13 Feb 2021 (11:02 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರ ಆಚಾರ್ಯ ಚಿತ್ರದ ಚಿತ್ರೀಕರಣದ ಮುಂದಿನ ವೇಳಾಪಟ್ಟಿಯನ್ನು ಕೊರಟಾಲ ಕಲ್ಲಿದ್ದಲು ಗಣಿಯಲ್ಲಿ ಮಾಡುವುದಾಗಿ ನಿರ್ಧರಿಸಲಾಗಿದೆ. ಇಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ನಡುವಿನ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.
ಹಾಗಾಗಿ ಕೊರಟಾಲ ಕಲ್ಲಿದ್ದಲು ಗಣಿಯಲ್ಲಿ ಚಿತ್ರೀಕರಣ ನಡೆಸಲು ಸರ್ಕಾರದ ಅನುಮತಿಗಾಗಿ ಕೊರಟಾಲ ಜಿಲ್ಲಾ ಸಚಿವ ಪುವಾಡಾ ಅಜಯ್ ಅವರನ್ನು ಆಚಾರ್ಯ ಚಿತ್ರತಂಡ ಭೇಟಿ ಮಾಡಿದೆ. ಈ ವೇಳೆ ನಿರ್ದೇಶಕರು ಸಚಿವರ ಬಳಿ ತಮ್ಮ ಮನವಿಯನ್ನು ಒಪ್ಪಿಸಿದ್ದು, ಸಚಿವರು ಇದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಚಿವರು ಇತ್ತೀಚೆಗೆ ಆಚಾರ್ಯ ಚಿತ್ರದ ಸೆಟ್ ಗೆ ಭೇಟಿ ನೀಡಿ ಚಿರಂಜೀವಿ ಅವರೊಂದಿಗೆ ಪೋಟೋ ತೆಗೆಸಿಕೊಂಡಿದ್ದಾರೆ ಎನ್ನಲಾಗಿದೆ.