Select Your Language

Notifications

webdunia
webdunia
webdunia
webdunia

ಭಟ್ರ ಸಾಹಿತ್ಯದಲ್ಲಿ ಅರಳಿದ ‘ಆನೆಬಲ’ ಚಿತ್ರದ ಸುಂದರ ಹಾಡು..!! ಚೆಂದದಭಾವನೆ ಲಿರಿಕಲ್ ವಿಡಿಯೋ ರಿಲೀಸ್

ಭಟ್ರ ಸಾಹಿತ್ಯದಲ್ಲಿ ಅರಳಿದ ‘ಆನೆಬಲ’ ಚಿತ್ರದ ಸುಂದರ ಹಾಡು..!! ಚೆಂದದಭಾವನೆ ಲಿರಿಕಲ್ ವಿಡಿಯೋ ರಿಲೀಸ್
ಬೆಂಗಳೂರು , ಬುಧವಾರ, 12 ಫೆಬ್ರವರಿ 2020 (19:29 IST)
ಆನೆಬಲ ಚಿತ್ರದ ಬಹು ನಿರೀಕ್ಷಿತ ಚೆಂದದ ಭಾವನೆ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ವಿಕಟ ಕವಿ ನಿರ್ದೇಶಕ ಯೋಗರಾಜ್ ಭಟ್ ಗೀಚಿರುವ ಸಾಹಿತ್ಯ ಈ ಹಾಡಿಗಿದೆ. 
ಪೂರ್ಣ ಚಂದ್ರ ತೇಜಸ್ವಿ ಮೆಲುವಾದ ಹಾಗೂ ಫೆಶ್ ಟ್ಯೂನ್ ಕಂಪೋಸ್ ಮಾಡಿಹಾಡಿನ ಶ್ರೀಮಂತಿಕೆ ಹೆಚ್ಚಿಸಿದ್ದಾರೆ. ಖ್ಯಾತ ಗಾಯಕಿ ಅನನ್ಯ ಭಟ್ ಮಧುರ ಕಂಠದಲ್ಲಿಚೆಂದದ ಭಾವನೆ ಹಾಡು ಅರಳಿದೆ. ಆಡು ಭಾಷೆಯಲ್ಲಿರುವ ಈ ಹಾಡಿನ ಸಾಹಿತ್ಯ ಪ್ರೀತಿಸುವ ಹೃದಯಗಳಿಗೆ ಬಹಳ ಹತ್ತಿರವಾಗಿದೆ.
webdunia
ಫೆಬ್ರವರಿ 28ಕ್ಕೆ ಬಿಡುಗಡೆಯಾಗಲು ರೆಡಿಯಾಗಿರೋ ಹೊಸ ತಂಡದ ಆನೆಬಲ' ಸಿನಿಮಾಪಕ್ಕಾ ಮಂಡ್ಯ ಸೊಗಡಿನ ಸಿನಿಮಾ. ರಾಗಿಮುದ್ದೆ ತಿನ್ನುವ ಸ್ಪರ್ಧೆಯೊಂದಿಗೆ ಜೀವನದಮೌಲ್ಯಗಳನ್ನು ಕೂಡಾ ಸಿನಿಮಾದಲ್ಲಿ ತೋರಿಸಲಾಗಿದೆ. ಸೂನಗಹಳ್ಳಿ ರಾಜು ಈಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗ್ರಾಮೀಣ ಕಥೆ, ಯುವಕರ ತುಂಟತನ, ಜಾನಪದ ಸಂಸ್ಕೃತಿ, ಹೀಗೆ ಎಲ್ಲವನ್ನೂ ಈ ಚಿತ್ರದಲ್ಲಿ ತೆರೆ ಮೇಲೆ ತರಲಾಗಿದೆ.
webdunia
ಎ.ವಿ. ವೇಣುಗೋಪಾಲ್ ಅಡಕಮಾರನಹಳ್ಳಿ ಈ ಚಿತ್ರದ ನಿರ್ಮಾಪಕರು. ಸಾಗರ್ ಹಾಗೂರಕ್ಷಿತ ಎಂಬ ಹೊಸ ಪ್ರತಿಭೆಗಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರತಿಯೊಂದು ಹಾಡು ಒಂದಕ್ಕಿಂತ ಒಂದು ಚೆಂದವಾಗಿ ಕಲರ್ ಫುಲ್ ಆಗಿ ಮೂಡಿಬಂದಿವೆ. ಈಗ ಬಿಡುಗಡೆಯಾಗಿರೋ ಚೆಂದದ ಭಾವನೆ ಹಾಡು ಎಲ್ಲರಿಗೂ ಇಷ್ಟವಾಗಿದ್ದು, ಹಾಡಿನ ಸಾಹಿತ್ಯವನ್ನು ಸಂಗೀತ ಪ್ರಿಯರು ಗುನುಗೋಕೆ ಶುರುಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದು ಮಾಡ್ತಿದೆ ಮಿಂಚಿನ ಬಳ್ಳಿ ಸಾಂಗ್..!!!