Webdunia - Bharat's app for daily news and videos

Install App

19 ಏಜ್ ಈಸ್ ನಾನ್ಸೆನ್ಸ್: ಹರೆಯದ ಹುರುಪಿಗೆ ಸಾಹಸ ಸ್ಪರ್ಶ!

Webdunia
ಸೋಮವಾರ, 2 ಡಿಸೆಂಬರ್ 2019 (17:14 IST)
ರಾಜೇಶ್ವರಿ ಫಿಲಂಸ್ ಬ್ಯಾನರಿನಡಿಯಲ್ಲಿ ಎಸ್. ಲೋಕೇಶ್ ನಿರ್ಮಾಣ ಮಾಡಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ. ಈ ಶೀರ್ಷಿಕೆಯ ಆಧಾರದಲ್ಲಿಯೇ ಇದರ ಕಥೆಯ ಚಹರೆಯ ಬಗ್ಗೆ ನಾನಾ ದಿಕ್ಕಿನ ಚರ್ಚೆಗಳು ನಡೆದಿದ್ದವು. ಹತ್ತೊಂಭತ್ತರ ಹರೆಯದ ಕಥೆ ಎಂದಾದ ಮೇಲೆ ಇಲ್ಲಿ ಪ್ರೀತಿಯೇ ಪ್ರಧಾನ, ಅದರ ಸುತ್ತಲೇ ಕಥೆ ಸುತ್ತುತ್ತದೆ ಎಂದೂ ಅನೇಕರು ಅಂದುಕೊಂಡಿದ್ದರೆ ಅಚ್ಚರಿಯೇನಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ನಲ್ಲಿ ಎಲ್ಲ ಕಲ್ಪನೆ, ಅನಿಸಿಕೆಗಳನ್ನು ಮೀರಿಕೊಂಡ ಕಥಾ ಹಂದರದ ಸ್ಪಷ್ಟ ರೂಪುರೇಷೆಗಳು ಸಿಕ್ಕಿವೆ.
ಈ ಚಿತ್ರವನ್ನು ಸುರೇಶ್ ಎಂ ಗಿಣಿ ನಿರ್ದೇಶನ ಮಾಡಿದ್ದಾರೆ. ಕನ್ನಡದ ಮಟ್ಟಿದೆ ಹೊಸಾ ಬಗೆಯ ಕಥೆಯೊಂದಿಗೆ 19 ಏಜ್ ಈಸ್ ನಾನ್ಸೆನ್ಸ್ ಅನ್ನು ನಿರ್ದೇಶನ ಮಾಡಿರುವ ಅವರು ಪ್ರತಿಯೊಂದು ವಿಚಾರದಲ್ಲಿಯೂ ಈ ಸಿನಿಮಾವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರಂತೆ. ಅದೆಲ್ಲವೂ ಟ್ರೇಲರ್ ಮೂಲಕವೇ ಸ್ಪಷ್ಟಗೊಂಡಿದೆ. ಈ ಸಿನಿಮಾದಲ್ಲಿ ಪ್ರೀತಿ, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳೂ ಇವೆ. ಆದರೆ ಅದೆಲ್ಲದರಲ್ಲಿ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳು ಮತ್ತು ನಾಯಕ ಮನುಷ್ ಅದನ್ನು ನಿರ್ವಹಿಸಿರೋ ರೀತಿ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ.
ಈ ಚಿತ್ರದಲ್ಲಿ ಮನುಷ್, ಮಧುಮಿತ ಮತ್ತು ಲಕ್ಷ್ಮಿ ಮಂಡ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮನುಷ್ ಪಾಲಿಗೆ ನಾಯಕನಾಗಿ ಇದು ಮೊದಲ ಅನುಭವ. ಆದರೆ ಆತ ಇಲ್ಲಿ ಮೈ ಝುಂ ಎನ್ನಿಸುವಂಥಾ ಸಾಹಸ ಸನ್ನಿವೇಶಗಳಲ್ಲಿ ಎಲ್ಲರೂ ಬೆರಗಾಗುವಂತೆ ನಟಿಸಿದ್ದಾರಂತೆ. ಸಾಹಸ ನಿರ್ದೇಶಕ ಶಿವು ಇಲ್ಲಿ ಕಥೆಗೆ ಪೂರಕವಾಗಿ, ಮನುಷ್ ಪ್ರತಿಭೆ, ತಾಕತ್ತುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಸಾಹಸ ಸನ್ನಿವೇಶಗಳನ್ನು ರೂಪಿಸಿದ್ದಾರಂತೆ. ಅದರ ಕೆಲ ಝಲಕ್ಕುಗಳು ಮಾತ್ರವೇ ಟ್ರೇಲರ್ನಲ್ಲಿ ಕಾಣಿಸಿದೆ. ಆದರೆ ಚಿತ್ರದುದ್ದಕ್ಕೂ ಅಲ್ಲಲ್ಲಿ ಅಸಲೀ ಶಕ್ತಿಯಂತೆ ಈ ಸಾಹಸ ಸನ್ನಿವೇಶಗಳು ಗರಿಗೆದರಿಕೊಳ್ಳಲಿವೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮುಂದಿನ ಸುದ್ದಿ
Show comments