Select Your Language

Notifications

webdunia
webdunia
webdunia
webdunia

ಹಿರಿಯ ಕಲಾವಿದರಿಗೆ ಕಥಾ ಸಂಗಮ ವಿಶೇಷ ಪ್ರದರ್ಶನ ನೀಡಿದ ರಿಷಬ್ ಶೆಟ್ಟಿ

ಹಿರಿಯ ಕಲಾವಿದರಿಗೆ ಕಥಾ ಸಂಗಮ ವಿಶೇಷ ಪ್ರದರ್ಶನ ನೀಡಿದ ರಿಷಬ್ ಶೆಟ್ಟಿ
ಬೆಂಗಳೂರು , ಸೋಮವಾರ, 2 ಡಿಸೆಂಬರ್ 2019 (10:18 IST)
ಬೆಂಗಳೂರು: ಏಳು ನಿರ್ದೇಶಕರು ಏಳು ಕತೆಗಳು ಮತ್ತು ಸಂಗೀತ ನಿರ್ದೇಶಕರು ಒಂದೇ ಸಿನಿಮಾಕ್ಕಾಗಿ ಕೆಲಸ ಮಾಡಿದ ಹೆಮ್ಮೆ ಕಥಾ ಸಂಗಮ ಸಿನಿಮಾದ್ದು. ಈ ಸಿನಿಮಾ ಡಿಸೆಂಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


ಆದರೆ ಅದಕ್ಕೂ ಮೊದಲು ನಿರ್ಮಾಪಕ, ನಟ ರಿಷಬ್ ಶೆಟ್ಟಿ ಸಿನಿಮಾವನ್ನು ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕರು, ನಟರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ. ಈ ವಿಶೇಷ ಪ್ರದರ್ಶನಕ್ಕೆ ಹಿರಿಯ ನಟ ಶಿವರಾಂ, ರಾಜೇಶ್, ನಿರ್ದೇಶಕ ಭಗವಾನ್ ಮತ್ತಿತರರು ಪಾಲ್ಗೊಂಡಿದ್ದರು.

ಪುಟ್ಟಣ್ಣ ಕಣಗಾಲ್ ಅವರಿಂದ ಸ್ಪೂರ್ತಿ ಪಡೆದು ನಿರ್ಮಾಣವಾದ ಸಿನಿಮಾ ಕಥಾ ಸಂಗಮ. ಹೀಗಾಗಿ ಪುಟ್ಟಣ್ಣ ಜತೆ ಕೆಲಸ ಮಾಡಿದ ತಂತ್ರಜ್ಞರು, ಕಲಾವಿದರಿಗಾಗಿ ಈ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮೆಲ್ಬೋರ್ನ್ ನಲ್ಲಿ ನಟ ಉಪೇಂದ್ರಗೆ ಗೌರವ ಸನ್ಮಾನ