Select Your Language

Notifications

webdunia
webdunia
webdunia
webdunia

ಎಟಿಎಂಗಳಲ್ಲಿ ನೋಟು ಅಭಾವಕ್ಕೆ ಎಸ್ ಬಿಐ ಹೊಸ ಸೂತ್ರ

ಎಟಿಎಂಗಳಲ್ಲಿ ನೋಟು ಅಭಾವಕ್ಕೆ ಎಸ್ ಬಿಐ ಹೊಸ ಸೂತ್ರ
ನವದೆಹಲಿ , ಶುಕ್ರವಾರ, 20 ಏಪ್ರಿಲ್ 2018 (07:28 IST)
ನವದೆಹಲಿ: ಕರ್ನಾಟಕ ಸೇರಿದಂತೆ ಕೆಲವೇ ಕೆಲವು ರಾಜ್ಯಗಳಲ್ಲಿ ಇದ್ದಕ್ಕಿದ್ದಂತೆ ಎಟಿಎಂಗಳಲ್ಲಿ ನೋಟಿನ ಅಭಾವ ಎದುರಾಗಿದ್ದು, ಗ್ರಾಹಕರು ಸಂಕಷ್ಟಪಡುವುದನ್ನು ತಪ್ಪಿಸಲು ಎಸ್ ಬಿಐ ಯೋಜನೆ ರೂಪಿಸಿದೆ.

ಭಾರತದ ಅತೀ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಎಸ್ ಬಿಐ ತನ್ನ ಗ್ರಾಹಕರಿಗೆ ಪಿಒಎಸ್ ಮೆಷಿನ್ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಸೂಚಿಸಿದೆ. ಈ ಮೆಷಿನ್ ಬಳಸಿ ಎಸ್ ಬಿಐ ಅಥವಾ ಬೇರೆ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಇರುವವರೂ ಹಣ ಡ್ರಾ ಮಾಡಿಕೊಳ್ಳಬಹುದಾಗಿದೆ.

ಈ ನಡುವೆ ಕರ್ನಾಟಕದಲ್ಲಿ ಹಣದ ಅಭಾವ ಎದುರಾಗಿರುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟನೆ ನೀಡಿದೆ. ಅಕ್ರಮ ತಡೆಯಲು ಬೇಕೆಂದೇ ಹಣದ ಅಭಾವ ಸೃಷ್ಟಿಸಿರಬಹುದು ಎಂಬ ಸುದ್ದಿಗಳನ್ನು ಅದು ಅಲ್ಲಗಳೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಟಿಪ್ಪಣಿಯಿಲ್ಲದೇ 15 ನಿಮಿಷಕ್ಕಿಂತ ಹೆಚ್ಚು ಭಾಷಣ ಮಾಡಲಾಗದು: ಬಿಜೆಪಿ ಟೀಕೆ