Webdunia - Bharat's app for daily news and videos

Install App

PPF New Rules: ಪಿಪಿಎಫ್, ಸುಕನ್ಯ ಸಮೃದ್ಧಿ ಎನ್ಎಸ್ಎಸ್ ಯೋಜನೆಗಳಲ್ಲಿ ಇಂದಿನಿಂದ ಈ ಬದಲಾವಣೆ ಗಮನಿಸಿ

Krishnaveni K
ಮಂಗಳವಾರ, 1 ಅಕ್ಟೋಬರ್ 2024 (13:36 IST)
ನವದೆಹಲಿ: ಪಿಪಿಎಪ್, ಸುಕನ್ಯ ಸಮೃದ್ಧಿ ಯೋಜನೆ ಮತ್ತು ಎನ್ಎಸ್ಎಸ್ ಯೋಜನೆಗಳಲ್ಲಿ ಇಂದಿನಿಂದ ಕೆಲವು ಬದಲಾವಣೆಯಾಗುತ್ತಿದ್ದು, ಇದರ ಬಗ್ಗೆ ಇಲ್ಲಿದೆ ಮಾಹಿತಿ.

ಅಂಚೆ ಕಚೇರಿಗಳ ಮೂಲಕ ತೆರೆಯಲಾಗುವ ಸಣ್ಣ ಉಳಿತಾಯ ಖಾತೆಗಳ ವಿವಿಧ ಯೋಜನೆಗಳಲ್ಲಿ ಕೆಲವು ಬದಲಾವಣೆಯಾಗುತ್ತಿದೆ. ನಿಯಮ ಪ್ರಕಾರ ಇಲ್ಲದ ಕೆಲವು ಖಾತೆಗಳನ್ನು ರೆಗ್ಯುಲರೈಸ್ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತಂದಿದೆ. ಅದು ಇಂದಿನಿಂದ ಜಾರಿಯಾಗಲಿದೆ.

ಎನ್ಎಸ್ಎಸ್ ಖಾತೆಗಳ ಬದಲಾವಣೆ
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ ಅಥವಾ ಎನ್ಎಸ್ಎಸ್ ಖಾತೆಯಲ್ಲಿ ಒಬ್ಬರೇ ವ್ಯಕ್ತಿ ಎರಡು ಖಾತೆಗಳನ್ನು ತೆರೆದಿದ್ದರೆ ಮೊದಲು ತೆರೆದ ಖಾತೆಯನ್ನು ಮಾನ್ಯ ಮಾಡಲಾಗುತ್ತದೆ.  ಎರಡನೇ ಖಾತೆಗೆ ಪೋಸ್ಟ್ ಆಫೀಸ್ ಸೇವಿಂಗ್ಸ್ ಖಾತೆಯ ಬಡ್ಡಿದರದ ಪ್ರಕಾರ ಶೇ.2 ರಷ್ಟು ಹೆಚ್ಚುವರಿ ಬಡ್ಡಿ ಕೊಡಲಾಗುತ್ತದೆ. ಒಂದು ವೇಳೆ ಎನ್ಎಸ್ಎಸ್ ಖಾತೆಗೆ ನಿಗದಿ ಮಾಡಿರುವ ವಾರ್ಷಿಕ ಠೇವಣಿ ಮಿತಿ ಮೀರಿ ಹಣವಿದ್ದರೆ ಅದಕ್ಕೆ ಮಿತಿಯೊಳಗಿರುವ ಹಣಕ್ಕೆ ಮಾತ್ರ ಬಡ್ಡಿ ಸಿಗುತ್ತದೆ. ಉಳಿದ ಹಣವನ್ನು ಬಡ್ಡಿರಹಿತವಾಗಿ ಠೇವಣಿದಾರರಿಗೆ ನೀಡಲಾಗುತ್ತದೆ.

ಅಪ್ರಾಪ್ತರ ಹೆಸರಿನಲ್ಲಿರುವ ಪಿಪಿಎಫ್ ಖಾತೆಗಳ ನಿಯಮ
ಮಕ್ಕಳ ಅಥವಾ ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆದಿದ್ದರೆ ಇದಕ್ಕೆ ರೆಗ್ಯುಲರ್ ಸ್ಕೀಮ್ ಪ್ರಕಾರ ಬಡ್ಡಿ ಇರುವುದಿಲ್ಲ. ಬದಲಾಗಿ ಸೇವಿಂಗ್ಸ್ ಖಾತೆಯ ನಿಯಮದಂತೆ ಬಡ್ಡಿ ದರ ನಿಗದಿಯಾಗುತ್ತದೆ. ಮಗುವಿಗೆ 18 ವರ್ಷ ದಾಟಿದ ಬಳಿಕವಷ್ಟೇ ರಗ್ಯುಲರ್ ಬಡ್ಡಿ ದರ ಅನ್ವಯವಾಗುತ್ತದೆ.

ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳ ನಿಯಮ
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪಿಪಿಎಫ್ ಖಾತೆ ತೆರೆಯಬಹುದಾಗಿದೆ. ಒಂದು  ವೇಳೆ ಒಂದಕ್ಕಿಂತ ಹೆಚ್ಚು ಖಾತೆ ತೆರೆದಿದ್ದರೆ ಮೊದಲು ತೆರೆದ ಖಾತೆಗೆ ಮಾತ್ರ ರೆಗ್ಯುಲರ್ ಬಡ್ಡಿದರ ಸಿಗುತ್ತದೆ. ಇತರೆ ಖಾತೆಗಳನ್ನು ಪ್ರೈಮರಿ ಖಾತೆಯೊಂದಿಗೆ ವಿಲೀನ ಮಾಡಲಾಗುತ್ತದೆ. ಅದರಲ್ಲೂ ವಾರ್ಷಿಕ ಹೂಡಿಕೆ ಮಿತಿ ಹಣ ದಾಟಿದ್ದರೆ ನಿಗದಿತ ಹೂಡಿಕೆಗೆ ಮಾತ್ರೆ ರೆಗ್ಯುಲರ್ ಬಡ್ಡಿದರ ಸಿಗಲಿದೆ. ಹೆಚ್ಚುವರಿ ಹಣವನ್ನು ಬಡ್ಡಿರಹಿತವಾಗಿ ಮರಳಿಸಲಾಗುತ್ತದೆ.

ತಂದೆ-ತಾಯಿ ಹೊರತಾಗಿ ಇತರರು ಪಿಪಿಎಫ್ ಖಾತೆ ತೆರೆದಿದ್ದರೆ
ಅಪ್ರಾಪ್ತ ಮಗುವಿನ ಹೆಸರಿನಲ್ಲಿ ತಂದೆ, ತಾಯಿ ಹೊರತಾಗಿ ಅಜ್ಜ, ಅಜ್ಜಿ ಅಥವಾ ಇನ್ಯಾರೇ ಪೋಷಕರು ಪಿಪಿಎಫ್ ಖಾತೆ ತೆರೆಯಲು ಅವಕಾಶವಿದೆ. ಅವರು ಮಗುವಿನ ಪೋಷಕರಾಗಿರುತ್ತಾರೆ. ಅಜ್ಜ-ಅಜ್ಜಿ ನ್ಯಾಚುರಲ್ ಗಾರ್ಡಿಯನ್ ಆಗಿರುವುದಿಲ್ಲ. ಅವರ ಹೆಸರಿನಲ್ಲಿ ಖಾತೆ ತೆರೆದಿದ್ದರೆ ಅದು ಲೀಗಲ್ ಪೋಷಕರಿಗೆ ವರ್ಗಾವಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments