Select Your Language

Notifications

webdunia
webdunia
webdunia
webdunia

ನರಕ

ನರಕ
ಭಾರತೀಯನೊಬ್ಬ ಸತ್ತ ಮೇಲೆ ನರಕಕ್ಕೆ ಹೋದ ಅಲ್ಲಿ ಬೇರೆ ಬೇರೆ ದೇಶಗಳ ನರಕಳೂ ಇದ್ದವು. ಅಲ್ಲದೆ ಯಾವುದೇ ವೀಸಾದ ಅಗತ್ಯವಿಲ್ಲದೆ ನಮಗೆ ಬೇಕಾದ ದೇಶದ ನರಕಕ್ಕೆ ಹೋಗುವ ಅವಕಾಶವೂ ಇತ್ತು.

ಜೀವಂತವಾಗಿರುವಾಗಂತೂ ವಿದೇಶಕ್ಕೆ ಹೋಗುವ ಕನಸು ನನಸಾಗಲಿಲ್ಲ ಇಲ್ಲಿ ಉಚಿತವಾಗಿ ಸಿಗುವ ಅವಕಾಶವನ್ನು ಬಿಡುವುದು ಯಾಕೆ ಎಂದು ಯೋಚಿಸಿದ ಭಾರತೀಯನು ಜರ್ಮನಿ, ಅಮೆರಿಕ, ರಶ್ಯಾ, ಜಪಾನ್ ದೇಶಗಳ ನರಕದಲ್ಲಿ ಹೋಗಿ ಶಿಕ್ಷೆ ಏನೆಂದು ಕೇಳಿದ.

ಇಲ್ಲಿ ಬಂದವರಿಗೆ ಮೊದಲಿಗೆ ವಿದ್ಯುತ್ ಖುರ್ಚಿಯ ಮೇಲೆ ಕುಳ್ಳಿರಿಸಿ ಶಿಕ್ಷೆ ನೀಡುತ್ತಾರೆ. ನಂತರ ಭೂತವೊಂದು ಬಂದು ಛಟಿಯೇಟು ನೀಡುತ್ತದೆ ಎಂದು ಅವರು ಕಠಿಣವಾದ ಶಿಕ್ಷೆಗಳ ಪಟ್ಟಿಯನ್ನೇ ಹೇಳುತ್ತಿದ್ದರು.

ಬೇಸರಗೊಂಡು ಭಾರತೀಯನು ಬೇರೆ ವಿಧಿಯಿಲ್ಲದೆ ಭಾರತದ ನರಕಕ್ಕೇ ಮರಳಿದಾಗ ಅವನಿಗೊಂದು ಆಶ್ಚರ್ಯ ಕಾದಿತ್ತು. ಭಾರತದ ನರಕದ ಮುಂದೆ ಇಷ್ಟುದ್ದ ಕ್ಯೂ. ಭಾರತದ ನರಕದಲ್ಲೂ ಕಠಿಣ ಶಿಕ್ಷೆ ಇದೆ ಮತ್ಯಾಕೆ ಇಲ್ಲಿ ಇಷ್ಟೊಂದು ಕ್ಯೂ ಅಂತ ಯೋಚಿಸಿ ಒಬ್ಬನನ್ನು ಪ್ರಶ್ನಿಸಿದಾಗ ಆತನು ಹೀಗೇಂದು ಉತ್ತರಕೊಟ್ಟ.

"ಇಲ್ಲಿ ವಿದ್ಯುತ್ ಕುರ್ಚಿ ಹಾಳಾಗಿದೆ ಮತ್ತು ವಿದ್ಯುತ್‌ನ ಕೊರತೆ ಇದೆ. ಇಲ್ಲಿಯ ಭೂತ ಹಿಂದೆ ಸರಕಾರಿ ಇಲಾಖೆಯಲ್ಲಿ ಕೆಲಸದಲ್ಲಿದ್ದವನಂತೆ. ಬಂದ ಕೂಡಲೇ ಸಹಿ ಹಾಕಿ ಕಾಫಿಗೆ ಹೋಗಿ ನಿದ್ದೆಮಾಡುತ್ತಾನೆ. " ಇದನ್ನು ಕೇಳಿದ ಭಾರತೀಯನು ತವರೂರ ಕ್ಯೂನಲ್ಲಿ ನಿಂತುಕೊಂಡ.

Share this Story:

Follow Webdunia kannada