Webdunia - Bharat's app for daily news and videos

Install App

ಕಪ್ ಗೆಲ್ಲದೇ ಇದ್ರೂ ನಮ್ ಸಪೋರ್ಟ್ ಆರ್ ಸಿಬಿಗೇ! ಮೈದಾನದಲ್ಲಿ ಕೊಹ್ಲಿ ಕಣ್ಣೀರು

Webdunia
ಮಂಗಳವಾರ, 12 ಅಕ್ಟೋಬರ್ 2021 (09:15 IST)
ದುಬೈ: ಐಪಿಎಲ್ ನಲ್ಲಿ ಒಂದಾದರೂ ಟ್ರೋಫಿ ಗೆಲ್ಲುವ ಕನಸು ವಿರಾಟ್ ಕೊಹ್ಲಿ ಪಾಲಿಗೆ ಕನಸಾಗಿಯೇ ಉಳಿಯಿತು. ನಿನ್ನೆಯ ಸೋಲಿನ ಬಳಿಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿಗೆ ಬೆಂಬಲ ಸೂಚಿಸಿದ್ದಾರೆ.


50 ಸಲ ಸೋತರೂ ಆರ್ ಸಿಬಿಗೇ ನಮ್ಮ ಸಪೋರ್ಟ್ ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದ್ದಾರೆ. ಇನ್ನು, ವಿರಾಟ್ ಕೊಹ್ಲಿಗೆ ವಿದಾಯ ಹೇಳಿದ್ದಾರೆ.

ಇನ್ನು, ಕೊನೆಯ ಪಂದ್ಯದಲ್ಲಿ ಭಾವುಕರಾದ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಬಾರಿಯಾದರೂ ಗೆದ್ದು ವಿದಾಯ ಹೇಳಬೇಕೆಂದು ಬಯಸಿದ್ದ ಕೊಹ್ಲಿಗೆ ನಿನ್ನೆ ನಿರಾಸೆಯಾಗಿತ್ತು. ಅಲ್ಲದೆ ನಾಯಕರಾಗಿ ಆರ್ ಸಿಬಿಯಲ್ಲಿ ಕೊನೆಯ ಪಂದ್ಯವಾಗಿತ್ತು. ಇವೆರಡೂ ದುಃಖದಿಂದ ಅವರ ಕಣ್ಣು ತುಂಬಿ ಬಂದಿತ್ತು. ಈ ಕ್ಷಣಗಳು ಅಭಿಮಾನಿಗಳ ಕಣ್ಣಲ್ಲೂ ನೀರು ತರಿಸಿದೆ.

ಪಂದ್ಯದ ಬಳಿಕ ವಿದಾಯ ಭಾಷಣ ಮಾಡಿರುವ ಕೊಹ್ಲಿ, ನಾನು ಎಂದೆಂದಿಗೂ ಆರ್ ಸಿಬಿ ಪರವಾಗಿಯೇ ಆಡುತ್ತೇನೆ. ನನಗೆ ವಿಧೇಯತೆಯೇ ಮುಖ್ಯ. ಈ ಫ್ರಾಂಚೈಸಿ ನನ್ನ ಮೇಲೆ ಭರವಸೆಯಿಟ್ಟಿತ್ತು. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ಈ ತಂಡಕ್ಕೆ ನನ್ನ ಬದ್ಧತೆಯಿರುತ್ತದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮತ್ತೊಂದು ವಿವಾದದಲ್ಲಿ ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿ, ಜಾಗಕ್ಕಾಗಿ ನೆರೆಹೊರೆಯರ ಜತೆ ಗುದ್ದಾಟ

IND vs ENG: ಅರ್ಷ್ ದೀಪ್ ಸಿಂಗ್ ಗೆ ಗಾಯ, ಜಸ್ಪ್ರೀತ್ ಬುಮ್ರಾ ಆಡುವುದು ಅನಿವಾರ್ಯ

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮುಂದಿನ ಸುದ್ದಿ
Show comments