Select Your Language

Notifications

webdunia
webdunia
webdunia
Wednesday, 9 April 2025
webdunia

ಕಪ್ ಗೆಲ್ಲದೇ ಇದ್ರೂ ನಮ್ ಸಪೋರ್ಟ್ ಆರ್ ಸಿಬಿಗೇ! ಮೈದಾನದಲ್ಲಿ ಕೊಹ್ಲಿ ಕಣ್ಣೀರು

ವಿರಾಟ್ ಕೊಹ್ಲಿ
ದುಬೈ , ಮಂಗಳವಾರ, 12 ಅಕ್ಟೋಬರ್ 2021 (09:15 IST)
ದುಬೈ: ಐಪಿಎಲ್ ನಲ್ಲಿ ಒಂದಾದರೂ ಟ್ರೋಫಿ ಗೆಲ್ಲುವ ಕನಸು ವಿರಾಟ್ ಕೊಹ್ಲಿ ಪಾಲಿಗೆ ಕನಸಾಗಿಯೇ ಉಳಿಯಿತು. ನಿನ್ನೆಯ ಸೋಲಿನ ಬಳಿಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿಗೆ ಬೆಂಬಲ ಸೂಚಿಸಿದ್ದಾರೆ.


50 ಸಲ ಸೋತರೂ ಆರ್ ಸಿಬಿಗೇ ನಮ್ಮ ಸಪೋರ್ಟ್ ಎಂದು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದ್ದಾರೆ. ಇನ್ನು, ವಿರಾಟ್ ಕೊಹ್ಲಿಗೆ ವಿದಾಯ ಹೇಳಿದ್ದಾರೆ.

ಇನ್ನು, ಕೊನೆಯ ಪಂದ್ಯದಲ್ಲಿ ಭಾವುಕರಾದ ವಿರಾಟ್ ಕೊಹ್ಲಿ ಮೈದಾನದಲ್ಲೇ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಬಾರಿಯಾದರೂ ಗೆದ್ದು ವಿದಾಯ ಹೇಳಬೇಕೆಂದು ಬಯಸಿದ್ದ ಕೊಹ್ಲಿಗೆ ನಿನ್ನೆ ನಿರಾಸೆಯಾಗಿತ್ತು. ಅಲ್ಲದೆ ನಾಯಕರಾಗಿ ಆರ್ ಸಿಬಿಯಲ್ಲಿ ಕೊನೆಯ ಪಂದ್ಯವಾಗಿತ್ತು. ಇವೆರಡೂ ದುಃಖದಿಂದ ಅವರ ಕಣ್ಣು ತುಂಬಿ ಬಂದಿತ್ತು. ಈ ಕ್ಷಣಗಳು ಅಭಿಮಾನಿಗಳ ಕಣ್ಣಲ್ಲೂ ನೀರು ತರಿಸಿದೆ.

ಪಂದ್ಯದ ಬಳಿಕ ವಿದಾಯ ಭಾಷಣ ಮಾಡಿರುವ ಕೊಹ್ಲಿ, ನಾನು ಎಂದೆಂದಿಗೂ ಆರ್ ಸಿಬಿ ಪರವಾಗಿಯೇ ಆಡುತ್ತೇನೆ. ನನಗೆ ವಿಧೇಯತೆಯೇ ಮುಖ್ಯ. ಈ ಫ್ರಾಂಚೈಸಿ ನನ್ನ ಮೇಲೆ ಭರವಸೆಯಿಟ್ಟಿತ್ತು. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ಈ ತಂಡಕ್ಕೆ ನನ್ನ ಬದ್ಧತೆಯಿರುತ್ತದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ‘ಕ್ಯಾಪ್ಟನ್’ ವಿರಾಟ್ ಕೊಹ್ಲಿಗೆ ಸೋಲಿನ ವಿದಾಯ