Webdunia - Bharat's app for daily news and videos

Install App

ಐಪಿಎಲ್ 2022: ಸೋಲಿನ ಬಳಿಕ ಟ್ರೋಲ್ ಆದ ಆರ್ ಸಿಬಿ

Webdunia
ಸೋಮವಾರ, 28 ಮಾರ್ಚ್ 2022 (08:40 IST)
ಮುಂಬೈ: 200 ರ ಗಡಿ ದಾಟಿದರೂ ಎದುರಾಳಿ ಕಿಂಗ್ಸ್ ಪಂಜಾಬ್ ನ್ನು ನಿಯಂತ್ರಿಸಲಾಗದೇ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ವಿಟರಿಗರಿಂದ ಟ್ರೋಲ್ ಗೊಳಗಾಗಿದೆ.

ನಿನ್ನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಆರ್ ಸಿಬಿ 205 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇಷ್ಟು ರನ್ ಗಳಿಸಿದ ಮೇಲೆ ಆರ್ ಸಿಬಿ ಗೆಲ್ಲಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಪಂಜಾಬ್ ಬ್ಯಾಟಿಗರು ಈ ಮೊತ್ತವನ್ನು 19 ಓವರ್ ಗಳಲ್ಲೇ ತಲುಪಿ 5 ವಿಕೆಟ್ ಗಳ ಗೆಲುವು ಕಂಡರು. ನಾಯಕ ಮಯಾಂಕ್ ಅಗರ್ವಾಲ್ 32,ಶಿಖರ್ ಧವನ್, ಭನುಕಾ ರಾಜಕಪಕ್ಸ ತಲಾ 43, ಒಡಿಯಾನ್ ಸ್ಮಿತ್ ಅಜೇಯ 25, ಶಾರುಖ್ ಖಾನ್ ಅಜೇಯ 24 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಪಂಜಾಬ್ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು.

ಇಷ್ಟು ದೊಡ್ಡ ಮೊತ್ತ ಗಳಿಸಿಯೂ ಸೋತ ಆರ್ ಸಿಬಿ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದೆ. ಹಳೆಯ ಆರ್ ಸಿಬಿ ವಾಪಸ್ ಬಂದಿದೆ ಎಂದು ಹಲವರು ಕಿಚಾಯಿಸಿದ್ದಾರೆ. ಇನ್ನು ಕೆಲವರು ಕೊಹ್ಲಿಯ ಫೋಟೋ ಪ್ರಕಟಿಸಿ, ಸದ್ಯ ಪ್ರೆಸೆಂಟೇಷನ್ ಕಾರ್ಯಕ್ರಮದಲ್ಲಿ ಸೋಲಿಗೆ ಕಾರಣ ಕೊಡುವ ತಲೆನೋವು ತಪ್ಪಿತು ಎಂದು ಲೇವಡಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ನೀವೇ ಕರೆಸಿ ಜಾತ್ರೆ ಮಾಡಿ ಈಗ ವಿರಾಟ್ ಕೊಹ್ಲಿ ಮೇಲೆ ಯಾಕೆ ಕೇಸ್ ಹಾಕ್ತೀರಿ

Vijay Mallya: ನಾನೇನಾದ್ರೂ ಆರ್ ಸಿಬಿಯಲ್ಲಿ ಇದ್ದಿದ್ರೆ ಕೆಎಲ್ ರಾಹುಲ್..: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ

Arrest Kohli: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿ ಹ್ಯಾಶ್‌ಟ್ಯಾಗ್‌

Bengaluru stampede: ಮೊನ್ನೆಯಷ್ಟೇ ಕೊಹ್ಲಿ ಜೊತೆ ಸುತ್ತಾಟ, ಇಂದು ಪೊಲೀಸರ ಜೊತೆ ಅಲೆದಾಟ

Bengaluru Stampede: ಮೃತರ ಕುಟುಂಬಗಳಿಗೆ ಆರ್‌ಸಿಬಿ ತಲಾ ₹1ಕೋಟಿ ಪರಿಹಾರ ನೀಡಲು ಹೆಬ್ಬಾಳಕರ ಒತ್ತಾಯ

ಮುಂದಿನ ಸುದ್ದಿ
Show comments