Select Your Language

Notifications

webdunia
webdunia
webdunia
webdunia

ಟಾಸ್‌ ಗೆದ್ದ ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ: ಗುಜರಾತ್‌ ವಿರುದ್ಧ ಬೆಂಗಳೂರು ತಂಡಕ್ಕೆ ದಕ್ಕುತ್ತಾ ಜಯ?

RCB

Sampriya

ಅಹಮದಾಬಾದ್ , ಭಾನುವಾರ, 28 ಏಪ್ರಿಲ್ 2024 (15:10 IST)
Photo Courtesy X
ಅಹಮದಾಬಾದ್: ಇಂದು ಅಹಮದಾಬಾದ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುಜರಾತ್‌ ಟೈಟನ್ಸ್ ತಂಡವನ್ನು ಎದುರಿಸುತ್ತಿದೆ. ಟಾಸ್‌ ಗೆದ್ದ ಬೆಂಗಳೂರು ತಂಡ ಬೌಲಿಂಗ್‌ ಆಹ್ವಾನಿಸಿದೆ.

ಐಪಿಎಲ್‌ನಲ್ಲಿ ಪ್ಲೇ ಆಫ್‌ ಹಾದಿಯಿಂದ ಬಹುದೂರದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ತಪ್ಪಿಸಿಕೊಳ್ಳುವ ಸಾಹಸ ಮಾಡುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಸತತ ಆರು ಸೋಲುಗಳ ನಂತರ ಸನ್‌ರೈಸರ್ಸ್‌ ವಿರುದ್ಧ ಗೆಲುವಿನ ರುಚಿ ಕಂಡಿರುವ ಫಫ್ ಡುಪ್ಲೆಸಿ ಬಳಗದ ಆತ್ಮವಿಶ್ವಾಸ ಮರಳಿ ಜಾಗೃತವಾಗಿದೆ. ಅದೇ ಹುಮ್ಮಸ್ಸಿನಲ್ಲಿ ಭಾನುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.

ಆಡಿರುವ ಒಂಬತ್ತು ಪಂದ್ಯಗಳಲ್ಲಿ ಬೆಂಗಳೂರು ತಂಡವು ಜಯಿಸಿರುವುದು ಎರಡು ಮಾತ್ರ. ಇನ್ನುಳಿದಿರುವ ಐದು ಪಂದ್ಯಗಳಲ್ಲಿ ಜಯಿಸಿದರೂ ಪ್ಲೇ ಆಫ್‌ ಅವಕಾಶ ಪಡೆಯುವುದು ಖಚಿತವಿಲ್ಲ.  

ಈಗಾಗಲೇ ಎಂಟು ಅಂಕ ಗಳಿಸಿರುವ ಗುಜರಾತ್ ತಂಡವನ್ನು ಸೋಲಿಸುವುದು ಸುಲಭವಲ್ಲ. ಶುಭಮನ್ ಗಿಲ್ ನಾಯಕತ್ವದ ತಂಡಕ್ಕೂ ಇನ್ನು ಐದು ಪಂದ್ಯಗಳು ಉಳಿದಿವೆ. ಕಳೆದ ಬಾರಿಯ ರನ್ನರ್ ಅಪ್ ತಂಡವಾಗಿರುವ ಗುಜರಾತ್ ತನ್ನ ತವರಿನಲ್ಲಿ ಜಯಿಸುವ ಛಲದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್‌ನಲ್ಲಿ ರಾಹುಲ್‌ ಹೊಸ ದಾಖಲೆ: ರನ್‌ ಮಿಷಿನ್‌ ಕೊಹ್ಲಿಯನ್ನು ಹಿಂದಿಕ್ಕಿದ ಕನ್ನಡಿಗ