Select Your Language

Notifications

webdunia
webdunia
webdunia
webdunia

ಅಂಪಾಯರ್ ಬಳಿಕ ಮ್ಯಾಚ್ ರೆಫರಿಯೂ ಐಪಿಎಲ್ ನಿಂದ ಹೊರಕ್ಕೆ

ಅಂಪಾಯರ್ ಬಳಿಕ ಮ್ಯಾಚ್ ರೆಫರಿಯೂ ಐಪಿಎಲ್ ನಿಂದ ಹೊರಕ್ಕೆ
ಮುಂಬೈ , ಶುಕ್ರವಾರ, 30 ಏಪ್ರಿಲ್ 2021 (10:02 IST)
ಮುಂಬೈ: ಕೊರೋನಾ ಭೀತಿಯಿಂದಾಗಿ ಅಂಪಾಯರ್ ನಿತಿನ್ ಮೆನನ್ ಐಪಿಎಲ್ ನಿಂದ ಹೊರಬಂದ ಬೆನ್ನಲ್ಲೇ ಇದೀಗ ಮ್ಯಾಚ್ ರೆಫರಿ ಮನು ನಯ್ಯರ್ ಕೂಟದಿಂದ ಹೊರನಡೆದಿದ್ದಾರೆ.


ಇದಕ್ಕೆ ಕಾರಣ ಮನು ಬಯೋ ಬಬಲ್ ಉಲ್ಲಂಘಿಸಿ ಹೊರನಡೆದಿರುವುದು. ತಮ್ಮ ತಾಯಿಯ ಸಾವಿನ ಸುದ್ದಿ ತಿಳಿದ ನಯ್ಯರ್ ಬಯೋ ಬಬಲ್‍ ಉಲ್ಲಂಘಿಸಿ ಹೊರನಡೆದಿದ್ದರು. ಇದರಿಂದಾಗಿ ಅವರೀಗ ಮತ್ತೆ ಕೂಟದಲ್ಲಿ ಭಾಗವಹಿಸಬೇಕಾದರೆ ಬಯೋಬಬಲ್ ವಾತಾವರಣದಲ್ಲಿ ಕ್ವಾರಂಟೈನ್ ಆಗಿ ಕೆಲವು ದಿನ ಕಳೆಯಬೇಕು.

ಆದರೆ ಸದ್ಯಕ್ಕೆ ಅವರು ತಮ್ಮ ಕೌಟುಂಬಿಕ ಆಘಾತದಿಂದ ಹೊರಬಂದು ವಾಪಸ್ ಐಪಿಎಲ್ ಜೈವ ಸುರಕ್ಷಾ ವಲಯವನ್ನು ಕೂಡಿಕೊಳ್ಳುವುದು ಅನುಮಾನವಾಗಿದೆ. ಹೀಗಾಗಿ ಅವರು ಈ ಐಪಿಎಲ್ ನ ಮುಂದಿನ ಪಂದ್ಯಗಳಲ್ಲಿ ಲಭ್ಯರಿರುವುದು ಅನುಮಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಗೆ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ತಂಡಗಳಿಂದ ಭಾರೀ ದೇಣಿಗೆ