Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಐಪಿಎಲ್ 14: ಆರ್ ಸಿಬಿ ಪಂದ್ಯಕ್ಕೆ ಕೊರೋನಾ ಕಾರ್ಮೋಡ

webdunia
ಮಂಗಳವಾರ, 4 ಮೇ 2021 (08:57 IST)
ಮುಂಬೈ: ಐಪಿಎಲ್ 14 ಗೂ ಈಗ ಕೊರೋನಾ ಭೀತಿ ಕಾಡಿದೆ. ನಿನ್ನೆ ನಡೆಯಬೇಕಾಗಿದ್ದ ಕೋಲ್ಕೊತ್ತಾ ನೈಡರ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯವನ್ನು ಕೊರೋನಾ ಕಾರಣಕ್ಕೆ ಮುಂದೂಡಲಾಗಿದೆ.


ಕೆಕೆಆರ್ ತಂಡದಲ್ಲಿ ಇಬ್ಬರು ಆಟಗಾರರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆರ್ ಸಿಬಿ-ಕೆಕೆಆರ್ ಪಂದ್ಯವನ್ನೇ ಮುಂದೂಡಲಾಗಿದೆ. ಈ ರೀತಿ ಆಗುತ್ತಿರುವುದು ಇದೇ ಮೊದಲು.

ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರ ಜೊತೆಗಿದ್ದ ಪ್ಯಾಟ್ ಕ್ಯುಮಿನ್ಸ್ ಗೆ ಸೋಂಕು ತಗುಲಿಲ್ಲ. ಹಾಗಿದ್ದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ನಿನ್ನೆಯ ಪಂದ್ಯವನ್ನು ಮುಂದೂಡಲಾಯಿತು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಡೇವಿಡ್ ವಾರ್ನರ್ ಗೆ ಹೈದರಾಬಾದ್ ಅವಮಾನ: ತಿರುಗಿಬಿದ್ದ ಸಹೋದರ