Publish Date: Fri, 08 Jan 2021 (09:52 IST)
Updated Date: Fri, 08 Jan 2021 (09:54 IST)
ಚೆನ್ನೈ: ಜನವರಿ 20 ರೊಳಗಾಗಿ ಎಲ್ಲಾ ಫ್ರಾಂಚೈಸಿಗಳು ಈ ವರ್ಷ ಹರಾಜಿಗೆ ಬಿಡುವ ಆಟಗಾರರ ಪಟ್ಟಿಯನ್ನು ನೀಡುವಂತೆ ಐಪಿಎಲ್ ಆಡಳಿತ ಮಂಡಳಿ ಸೂಚಿಸಿದೆ.
ಅದರಂತೆ ಸಿಎಸ್ ಕೆ ತನ್ನ ತಂಡದಿಂದ ಕೈಬಿಡಲು ಉದ್ದೇಶಿಸಿರುವ ಆಟಗಾರರ ಲಿಸ್ಟ್ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಸಿಎಸ್ ಕೆ ಕೇದಾರ್ ಜಾಧವ್ ರನ್ನು ಕೈ ಬಿಡಲು ನಿರ್ಧರಿಸಿದೆ ಎನ್ನಲಾಗಿದೆ. 7.8 ಕೋಟಿ ರೂ.ಗೆ ಜಾಧವ್ ರನ್ನು ಸಿಎಸ್ ಕೆ ಖರೀದಿಸಿತ್ತು. ಆದರೆ ಅವರು ಸಂಪೂರ್ಣ ವಿಫಲರಾಗಿದ್ದರು. ಇವರ ಜೊತೆಗೆ ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಪಿಯೂಷ್ ಚಾವ್ಲಾರನ್ನೂ ಕೈ ಬಿಡುವ ಸಾಧ್ಯತೆಯಿದೆ. ಆದರೆ ಸುರೇಶ್ ರೈನಾರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.