Webdunia - Bharat's app for daily news and videos

Install App

ಐಪಿಎಲ್ 13: ವಿವಾದಕ್ಕೆ ಕಾರಣವಾಯ್ತು ಧೋನಿ ಹೇಳಿಕೆ

Webdunia
ಮಂಗಳವಾರ, 20 ಅಕ್ಟೋಬರ್ 2020 (09:11 IST)
ದುಬೈ: ಐಪಿಎಲ್ ನಲ್ಲಿ ಸದಾ ಚಾಂಪಿಯನ್ ಆಗಿ ಮೆರೆಯುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಪ್ಲೇ ಆಫ್ ನಿಂದ ಹೊರಬೀಳುತ್ತಿರುವ ಮೊದಲ ತಂಡ ಎನ್ನುವ ಕುಖ್ಯಾತಿಗೆ ಒಳಗಾಗುವ ಸಾಧ್ಯತೆಯಿದೆ.
 


ತಂಡದ ಈ ದುಸ್ಥಿತಿ ಬಗ್ಗೆ ನೆಟ್ಟಿಗರು, ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಧೋನಿಯ ತಪ್ಪು ನಿರ್ಧಾರಗಳ ಬಗ್ಗೆ ಹೇಳುತ್ತಿದ್ದರೆ, ಮತ್ತೆ ಕೆಲವರು ಗೆಲ್ಲಲಿ, ಸೋಲಲಿ ನಮ್ಮ ಬೆಂಬಲ ತಂಡದ ಜತೆಗಿರುತ್ತದೆ ಎಂದಿದ್ದಾರೆ. ಧೋನಿ ಕೇಧಾರ್ ಜಾಧವ್ ಗೆ ಅವಕಾಶ ನೀಡಿದ್ದು, ಸ್ವತಃ ತಾವು ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶಿಸದೇ ಇರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.

ಅದೂ ಸಾಲದೆಂಬಂತೆ ರಾಜಸ್ಥಾನ್ ವಿರುದ್ಧದ ಪಂದ್ಯದ ಬಳಿಕ ಧೋನಿ ‘ಯುವ ಆಟಗಾರರಿಗೆ ಬೆಂಬಲಿಸಲು ಅವರಲ್ಲಿ ಅಂತಹ ಕಿಡಿ ಕಾಣಲೇ ಇಲ್ಲ’ ಎಂದು ಉಡಾಫೆ ಹೇಳಿಕೆ ನೀಡಿದ್ದು, ಅಭಿಮಾನಿಗಳು, ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಯುವ ಆಟಗಾರರಿಗೆ ಅವಕಾಶ, ಪ್ರೋತ್ಸಾಹ ನೀಡಿದ್ದ ಧೋನಿಯಿಂದ ಇಂತಹ ಹೇಳಿಕೆ ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ಮುಟ್ಟಿದ್ದಲ್ಲವೂ ಚಿನ್ನ ಎಂಬಂತಿದ್ದ ಧೋನಿಗೆ ಯಾಕೋ ಈ ಬಾರಿ ಟೂರ್ನಿ ಆರಂಭದಿಂದಲೂ ಕೆಟ್ಟ ಗಳಿಗೆ ಮುಂದುವರಿದುಕೊಂಡು ಬಂದಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೀಲಂಕಾದಿಂದ ಎತ್ತಂಗಡಿಯಾದ ಐಸಿಸಿ ಚೊಚ್ಚಲ ಮಹಿಳಾ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಭಾರತದ ಹೆಗಲಿಗೆ

ಸಾಲು ಸಾಲು ದಾಖಲೆ ಬರೆದು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ ಹೇಳಿದ ದಿಗ್ಗಜ ಲಯೊನೆಲ್‌ ಮೆಸ್ಸಿ

ಕಾರಿನ ಬಳಿ ಬಂದು ಸಹಾಯ ಬೇಡಿದ ಗೋರಕ್ಷಕನಿಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮಾಡಿದ್ದೇನು Video

ಮೆಟ್ರೋ ರೈಲಿನಲ್ಲಿ ಸಾಮಾನ್ಯರಂತೆ ಮೂಲೆಯಲ್ಲಿ ನಿಂತಿದ್ದ ಜಾವಗಲ್ ಶ್ರೀನಾಥ್ ನೋಡಿ ಪಬ್ಲಿಕ್ ಶಾಕ್

ಭಾರತ ಟಿ20 ತಂಡದಿಂದ ಕೈಬಿಟ್ಟಿದ್ದು ಆಘಾತ ತಂದಿದೆ: ಕೊನೆಗೂ ಮೌನ ಮುರಿದ ಸೂರ್ಯಕುಮಾರ್‌ ಯಾದವ್‌

ಮುಂದಿನ ಸುದ್ದಿ
Show comments