ಐಪಿಎಲ್: ಎಬಿಡಿ ವಿಲಿಯರ್ಸ್ ಬೆಂಕಿ, ಬೌಲರ್ ಗಳ ಚೆಂಡು,ಆರ್ ಸಿಬಿಗೆ ಮತ್ತೊಂದು ಗೆಲುವು

Webdunia
ಗುರುವಾರ, 25 ಏಪ್ರಿಲ್ 2019 (07:16 IST)
ಬೆಂಗಳೂರು: ಎಬಿಡಿ ವಿಲಿಯರ್ಸ್ ಬ್ಯಾಟಿಂಗ್ ಅಬ್ಬರ ಮತ್ತು ಬೌಲರ್ ಗಳ ಬೆಂಕಿ ಎಸೆತಕ್ಕೆ ಆರ್ ಸಿಬಿ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 17 ರನ್ ಗಳಿಂದ ಸೋಲಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಕೊಹ್ಲಿ ವಿಕೆಟ್ ಬೇಗನೇ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ ನಂತರ ಬ್ಯಾಟಿಂಗ್ ಗಿಳಿದ ಎಬಿಡಿ ವಿಲಿಯರ್ಸ್ 44 ಎಸೆತಗಳಲ್ಲಿ 82 ರನ್ ಸಿಡಿಸಿದರು. ಆ ಮೂಲಕ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣ ತಮ್ಮ ಪಾಲಿಗೆ ಲಕ್ಕಿ ಎಂದು ಸಾಬೀತುಪಡಿಸಿದರು. ಇವರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಂಜಾಬ್ ಪರ ನಿಕಲಸ್ ಪೂರನ್ 46, ಕೆಎಲ್ ರಾಹುಲ್ 42 ಮತ್ತು ಮಯಾಂಕ್ ಅಗರ್ವಾಲ್ 35 ರನ್ ಗಳಿಸಿದರು. ಆರ್ ಸಿಬಿ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ನವದೀಪ್ ಸೈನಿ 4 ಓವರ್ ಗಳಲ್ಲಿ 33 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಕಿತ್ತರೆ, ಉಮೇಶ್ ಯಾದವ್ 3 ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಗೌತಮ್ ಗಂಭೀರ್ ಇಲ್ಲದ್ದಕ್ಕೇ ಟೀಂ ಇಂಡಿಯಾ ಗೆದ್ದಿದ್ದು: ಫುಲ್ ಟ್ರೋಲ್

IND VS ZIM: ಜಿಂಬಾಬ್ವೆ ವಿರುದ್ಧ ಗೆದ್ದು ಬೀಗಿ ಟಿ20 ಸೋಲಿನ ಸರಣಿಗೆ ಅಂತ್ಯ ಹಾಡಿದ ಭಾರತ

IND vs ZIM: ಭಾರತದ ಯುವ ಬೌಲರ್‌ಗಳಿಗೆ ತತ್ತರಿಸಿದ ಜಿಂಬಾಬ್ವೆ, ಗಳಿಸಿದ ರನ್ ಎಷ್ಟು ಗೊತ್ತಾ

IND vs ZIM: ಟೀಂ ಇಂಡಿಯಾಗೆ ಇಂದಿನಿಂದ ಜಿಂಬಾಬ್ವೆ ಟಿ20 ಸರಣಿ: ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

Video: ಕೆಸರನ್ನು ಲೆಕ್ಕಿಸದೆ ಬರಿಗಾಲದಲ್ಲಿ ವೃಂದಾವನಕ್ಕೆ ಭೇಟಿ ನೀಡಿದ ವಿರಾಟ್‌- ಅನುಷ್ಕಾ ದಂಪತಿ

ಮುಂದಿನ ಸುದ್ದಿ
Show comments