Select Your Language

Notifications

webdunia
webdunia
webdunia
webdunia

ಉತ್ತಪ್ಪ ವರ್ತನೆ ವಿರುದ್ಧ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ಯುವರಾಜ್

ಉತ್ತಪ್ಪ ವರ್ತನೆ ವಿರುದ್ಧ ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ಯುವರಾಜ್
ಕೋಲ್ಕತ್ತಾ , ಸೋಮವಾರ, 1 ಮೇ 2017 (12:48 IST)
ನಿನ್ನೆ ನಡೆದ ಐಪಿಎಲ್ ಪಂದ್ಯದ ವೇಳೆ ಕೋಲ್ಕತ್ತಾ ಬ್ಯಾಟ್ಸ್`ಮನ್ ರಾಬಿನ್ ಉತ್ತಪ್ಪ, ಹೈದ್ರಾಬಾದ್ ಬೌಲರ್ ಸಿದ್ಧಾರ್ಥ ಕೌಲ್`ಗೆ ಭುಜದಿಂದ ಹೊಡೆದ ಅಸಭ್ಯ ವರ್ತನೆ ತೋರಿದ ಘಟನೆ ನಡೆದಿದೆ.  

3ನೇ ಓವರ್`ನಲ್ಲಿ ಕೌಲ್ ಎಸೆತವನ್ನ ಬೌಂಡರಿಗಟ್ಟಿದ ಪ ಕೃತ್ಯದ ಬಗ್ಗೆ ವಿವರಣೆ ಕೇಳುತ್ತಾರೆ. ಗುದ್ದಿದ್ದಾರೆ. ಇದರಿಂದ ಕೋಪಗೊಂಡ ಕೌಲ್ ಸಹ ಕೆಲ ಮಾತುಗಳನ್ನಾಡುತ್ತಾರೆ. ಬಳಿಕ ಪಾಂಡೆ ಬಳಿಗೆ ತೆರಳಿದ ಕೆಲ ಚಾಟ್ ಮಾಡುತ್ತಾರೆ.

ಇದಾದ ಬಳಿಕ ಹೈದ್ರಾಬಾದ್ ಆಟಗಾರರೆಲ್ಲ ವಾರ್ನರ್ ಬಳಿಗೆ ತೆರಳಿ ದೂರುತ್ತಾರೆ. ಈ ಸಂದರ್ಭ ಉತ್ತಪ್ಪ ಭುಜ ತಟ್ಟುವ ವಾರ್ನರ್ ನೀನು ಮಾಡಿದ್ದು ಸರಿಯಲ್ಲವೆಂದು ಬುದ್ಧಿ ಹೇಳುತ್ತಾರೆ. ಅಂಪೈರ್ ಎಸ್. ರವಿ ಬಳಿಗೆ ಬಂದು ಉತ್ತಪ್ಪ ವಿವರಣೆ ಕೇಳುತ್ತಾರೆ. ಉತ್ತಪ್ಪ ಕೃತ್ಯದ ಬಗ್ಗೆ ಕೋಪಗೊಂಡ ಹಿರಿಯ ಆಟಗಾರ ಯುವರಾಜ್ ಸಿಂಗ್ ಸಹ ತಲೆ ಅಲುಗಾಡುಸುತ್ತಾ ಕೆಲ ಮಾತುಗಳನ್ನಾಡುತ್ತಾರೆ. ಉತ್ತಪ್ಪ ವರ್ತನೆಯಿಂದ ಯುವಿ ಅಸಮಾಧಾನಗೊಂಡಿದ್ದು, ಅಲ್ಲಿ ಸ್ಪಷ್ಟವಾಗುತ್ತೆ.

ಬಳಿಕ ಮಳೆಯಿಂದ ಪಂದ್ಯ ನಿಂತಾಗ ಯುವಿ, ಉತ್ತಪ್ಪ ಹೆಗಲ ಮೇಲೆ ಕೈಹಾಕಿ ನಡೆದುಕೊಮಡು ಹೋಗುತ್ತ಻ರೆ. ಈ ಸಂದರ್ಭ ಉತ್ತಪ್ಪ  ಯುವಿ ಕಡೆ ಕೈಎತ್ತಿ ಕ್ಷಮೆ ಕೇಳುತ್ತಾರೆ. ಉತ್ತಪ್ಪ ವಿರುದ್ಧ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೌಂಡರಿ ತಡೆಯಲು ಡೈ ಹೊಡೆದ ಯಶಸ್ವಿ ಆಟಗಾರ ಐಪಿಎಲ್`ನಿಂದಲೇ ಔಟ್