Webdunia - Bharat's app for daily news and videos

Install App

ಮಹಾಯುದ್ಧದ ಎಚ್ಚರಿಕೆ ನೀಡಿದ ರಷ್ಯಾ!?

Webdunia
ಮಂಗಳವಾರ, 26 ಏಪ್ರಿಲ್ 2022 (15:23 IST)
ಮಾಸ್ಕೋ : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇದೀಗ ಮತ್ತೊಂದು ಅಪಾಯದ ಸೂಚನೆ ನೀಡಿದೆ.
 
ಮೂರೇ ದಿನಕ್ಕೆ ಉಕ್ರೇನ್ ಮುಗಿಸಲು ಹೋದ ರಷ್ಯಾ ತಿಂಗಳು ಕಳೆದರೂ ಉಕ್ರೇನ್ ಕೈವಶ ಮಾಡಲು ಸಾಧ್ಯವಾಗಿಲ್ಲ. ಉಕ್ರೇನ್ ಬಹುತೇಕ ಧ್ವಂಸಗೊಂಡಿದ್ದರೂ ಹೋರಾಟ ನಿಂತಿಲ್ಲ. ಇತ್ತ ಹಲವು ದೇಶಗಳು ಉಕ್ರೇನ್ಗೆ ಬೆಂಬಲ ನೀಡಿದೆ.

ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ರಷ್ಯಾ, ಇದೀಗ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ. ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋ ವಿಶ್ವ ಮಹಾ ಯುದ್ಧದ ಸೂಚನೆ ನೀಡಿದ್ದಾರೆ. ರಷ್ಯಾ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಸರ್ಗೆ ಲಾವ್ರೋ ಈ ಸ್ಫೋಟಕ ಮಾತುಗಳನ್ನಾಡಿದ್ದಾರೆ.

ಉಕ್ರೇನ್ ಜೊತೆ ಶಾಂತಿ ಮಾತುಕತೆ ಮುಂದುವರಿಯಲಿದೆ. ಆದರೆ ಮೂರನೇ ಮಹಾಯುದ್ಧದ ನೈಜ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಾತುಕತೆ ಹಾಗೂ ಸಂಧಾನಗಳಿಗೆ ಒಂದು ಮಿತಿ ಇದೆ. ಉತ್ತಮ ಸಂಬಂಧವಿಲ್ಲದಿದ್ದರೆ ಮಾತುಕತೆಗೆ ಅರ್ಥವೂ ಇರುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂದು ಲಾವ್ರೋ ಹೇಳಿದ್ದಾರೆ.

ಈ ಮೂಲಕ ತನ್ನ ದಾಳಿಗೆ ಜಗ್ಗದ ಉಕ್ರೇನ್ ಮೇಲೆ ಇದೀಗ 3ನೇ ಮಹಾಯುದ್ಧ ಅಸ್ತ್ರ ಪ್ರಯೋಗಿಸಲು ರಷ್ಯಾ ಮುಂದಾಗಿದೆ. ಇತ್ತ ಉಕ್ರೇನ್ ಬೆಂಬಲಿಸುತ್ತಿರುವ ದೇಶಗಳಿಗೂ ರಷ್ಯಾ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ.

ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದ ರಷ್ಯಾ, ಒಂದೇ ದಿನ ಉಕ್ರೇನ್ನ 1001 ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಉಕ್ರೇನ್ನ ವಿವಿಧ ನಗರಗಳು, ಆಯಕಟ್ಟಿನ ಸ್ಥಳಗಳು, ರಷ್ಯಾದ ಮೇಲೆ ದಾಳಿ ನಡೆಸುತ್ತಿರುವ ಸ್ಥಳಗಳು ಸೇರಿದಂತೆ ಒಟ್ಟು 1001 ಸ್ಥಳಗಳ ಮೇಲೆ ಇಡೀ ದಿನ ದಾಳಿ ನಡೆಸಲಾಯಿತು ಎಂದು ರಷ್ಯಾ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments