ಕಮಲದ ಜತೆ ರೂಪದರ್ಶಿ ಫೋಟೊ ತೆಗೆಸಿದ್ದಕ್ಕೆ ಭಾರೀ ದಂಡ.. ಯಾಕೆ ಗೊತ್ತಾ…?

Webdunia
ಸೋಮವಾರ, 25 ಸೆಪ್ಟಂಬರ್ 2017 (19:53 IST)
ರಷ್ಯಾ: ಕಮಲದ ಹೂವಿನೊಂದಿಗೆ ಫೋಟೊಗೆ ಪೋಸ್ ಕೊಟ್ಟಿದ್ದ ಮಾಡೆಲ್ ಗೆ ಈಗ ರಷ್ಯಾ ಸರ್ಕಾರ ಭಾರೀ ದಂಡ ವಿಧಿಸಿದೆ.

ವೊಲ್ಗೊಗಾರ್ಡ್ ಒಬ್ಲಾಸ್ಟ್ ಪ್ರದೇಶದ 19 ವರ್ಷದ ರೂಪದರ್ಶಿ ನತಾಲಿಯ ಗುರೋವಾ ಭಾರೀ ದಂಡ ತೆರಬೇಕಾಗಿರುವ ಯುವತಿ. ಅರೆ… ಹೂವು ಹಿಡಿದುಕೊಂಡು ಪೋಸ್ ಕೊಟ್ಟಿದ್ದಕ್ಕೆ ಇಂತಹ ದೊಡ್ಡ ಸಂಕಷ್ಟ ಎದುರಾಯಿತ  ಅಂದುಕೊಳ್ಳಬೇಡಿ. ಕಾರಣ ಇಷ್ಟೇ… ರಷ್ಯಾದಲ್ಲಿ ನೆಲುಂಬೋ ಎಂಬ ಜಾತಿಗೆ ಸೇರಿದ ತಿಳಿ ಗುಲಾಬಿ ಬಣ್ಣದ ಕಮಲದ ಹೂವು ಅಳಿವಿನಂಚಿನಲ್ಲಿದೆ. ಇದೇ ನೆಲುಂಬೊ ಕಮಲದ ಜತೆ ತಿಳಿ ಗುಲಾಬಿ ಬಣ್ಣದ ಗೌನ್ ಹಾಕಿದ್ದ ನತಾಲಿಯ ರೊಮ್ಯಾಂಟಿಕ್ ಆಗಿ ಫೋಟೊಗೆ ಪೋಸ್ ಕೊಟ್ಟಿದ್ದಾಳೆ.

ಈ ಫೋಟೊಗಳನ್ನ ಆಕೆ ಆನ್ ಲೈನ್ ಗೆ ಹಾಕಿದ್ದಾಳೆ. ಈಗ ಅದೇ ಆಕೆಗೆ ಸಂಕಷ್ಟ ತಂದಿದೆ. ಫೋಟೊ ಶೂಟ್ ಬಳಿಕ ಆ ಸ್ಥಳದಲ್ಲಿ ಹಲವು ಕಮಲದ ಗಿಡಗಳು ಹಾಳಾಗಿವೆ. ಈ ಫೋಟೊ ಶೂಟ್ ವೇಳೆ ನತಾಲಿಯಾ ಗಿಡಗಳನ್ನು ಹಾಳು ಮಾಡಿದ್ದಾಳೆಂದು ಅಲ್ಲಿನ ಪರಿಸರ ಪ್ರಿಯರು ಈಕೆಯ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಎಷ್ಟು ಹೂವು ಹಾಳು ಮಾಡಿದ್ದಾಳೊ ತನಿಖೆ ಮಾಡಿ, ಅದಕ್ಕೆ ಸರಿಯಾದ ದಂಡ ಕಟ್ಟಲು ಹೇಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಫೋಟೊ ಗೀಳಿಗೆ ಅಳಿವಿನಂಚಿನಲ್ಲಿದ್ದ ಕಮಲದ ಗಿಡಗಳು ಹಾಳಾಗಿರುವುದು ಮಾತ್ರ ಬೇಸರದ ಸಂಗತಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

BB Season 12, ಧ್ರುವಂತ್ ಮಾತಿಂದ್ದ ರೊಚ್ಚಿಗೆದ್ದ ಸೂರಜ್, ಧನುಷ್, ಸ್ಪಂದನಾ

ಸಿದ್ದರಾಮಯ್ಯ ಕಾಂಗ್ರೆಸ್ಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ: ಎಚ್ ವಿಶ್ವನಾಥ್

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆಶಿ ಪರ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬರ ಸಂಘ ಹೋರಾಟದ ಎಚ್ಚರಿಕೆ

ಮುಂದಿನ ಸುದ್ದಿ
Show comments