Webdunia - Bharat's app for daily news and videos

Install App

ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಪತ್ನಿ ಜೊತೆ ಗಾಜಿನ ಪರದೆ ಹಿಂದೆ ಶುಭಾಂಶು ಶುಕ್ಲ ಮೌನ ಸಂಭಾಷಣೆ

Krishnaveni K
ಬುಧವಾರ, 25 ಜೂನ್ 2025 (14:14 IST)
Photo Credit: X
ಫ್ಲೋರಿಡಾ: 41 ವರ್ಷಗಳ ಬಳಿಕ ಭಾರತದ ಗಗನಯಾತ್ರಿಯೊಬ್ಬರು ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಇಂದು ಫ್ಲೋರಿಡಾ ನಾಸಾ ಕೇಂದ್ರದಿಂದ ಉಡಾವಣೆಗೊಂಡ ಆಕ್ಸಿಯಂ ಮಿಷನ್ 4 ನಲ್ಲಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲ ಸೇರಿದಂತೆ ನಾಲ್ವರು ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದ್ದಾರೆ.

ಈ ಮೂಲಕ ಶುಭಾಂಶು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಬಾಹ್ಯಾಕಾಶಕ್ಕೆ ತೆರಳುವುದು ಎಂದರೆ ಸಾಮಾನ್ಯವಲ್ಲ. ಅವರನ್ನು ಇದಕ್ಕಾಗಿ ಹಲವು ತಿಂಗಳುಗಳ ಕಾಲ ಪರೀಕ್ಷಿಸಿ, ಪ್ರಯೋಗಕ್ಕೊಳಪಡಿಸಲಾಗುತ್ತದೆ. ಬಾಹ್ಯಾಕಾಶದ ವಾತಾವರಣದಲ್ಲಿರಿಸಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವರೇ ಎಂದು ಪರೀಕ್ಷಿಸಲಾಗುತ್ತದೆ. ಎಲ್ಲಾ ಪರೀಕ್ಷೆ ಪಾಸ್ ಆದರೆ ಮಾತ್ರ ಬಾಹ್ಯಾಕಾಶ ಯಾತ್ರೆಗೆ ಅರ್ಹರಾಗುತ್ತಾರೆ.

ಇನ್ನು, ಒಮ್ಮೆ ಆಯ್ಕೆಯಾದ ಬಳಿಕ ಅವರು ಕುಟುಂಬದ ಜೊತೆ ಸಾಮಾನ್ಯ ವಾತಾವರಣದಲ್ಲಿ ಕಾಲ ಕಳೆಯಲು ಆಗುವುದಿಲ್ಲ. ಆದರೆ ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಶುಭಾಂಶು ತಮ್ಮ ಪತ್ನಿಯನ್ನು ಭೇಟಿ ಮಾಡಿ ವಿದಾಯ ಹೇಳಿದ್ದಾರೆ.

ಆದರೆ ಇವರಿಬ್ಬರ ಮುಖಾಮುಖಿಗೆ ಗಾಜಿನ ಪರದೆ ಅಡ್ಡವಾಗಿದೆ. ಗಾಜಿನ ಪರದೆಯ ನಡುವೆಯೇ ದಂಪತಿ ನಿಂತು ಒಬ್ಬರನ್ನೊಬ್ಬರು ನೋಡಿಕೊಂಡು ಮೌನವಾಗಿ ಬೀಳ್ಕೊಟ್ಟಿದ್ದಾರೆ. ಶುಭಾಂಶು ಪತ್ನಿ ಕಾಮ್ನಾ ಅಲ್ಲಿಂದಲೇ ಪತಿಗೆ ವಿದಾಯ ಹೇಳುವಾಗ ಇಬ್ಬರೂ ಭಾವುಕರಾಗಿದ್ದಾರೆ. ಇನ್ನು, ಶುಭಾಂಶು ಕೂಡಾ ಪತ್ನಿಗೆ ಇನ್ ಸ್ಟಾಗ್ರಾಂ ಮೂಲಕ ಧನ್ಯವಾದ ಸಲ್ಲಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಧರ್ಮಸ್ಥಳ, ಅನಾಮಿಕ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಹೊಸ ಬಾಂಬ್‌

ಪಕ್ಷದ ಶಿಸ್ತು ಉಲ್ಲಂಘನೆ: ಶಾಸಕಗೆ ಶಿವಗಂಗಾಗೆ ಬಿಸಿ ಮುಟ್ಟಿಸಿದ ಡಿಕೆ ಶಿವಕುಮಾರ್‌

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ಮುಂದಿನ ಸುದ್ದಿ
Show comments