Webdunia - Bharat's app for daily news and videos

Install App

ಇರಾನ್ ಪ್ರತೀಕಾರದ ಕಿಚ್ಚು: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಪಕ್ಕಾ

Krishnaveni K
ಸೋಮವಾರ, 23 ಜೂನ್ 2025 (10:39 IST)
ನವದೆಹಲಿ: ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ರೊಚ್ಚಿಗೆದ್ದಿರುವ ಇರಾನ್ ಈಗ ತೈಲ ಹಾದಿ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಬೆದರಿಕೆ ಹಾಕಿದೆ. ಇದರಿಂದ ಭಾರತ ಸೇರಿದಂತೆ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಚಿತವಾಗಿದೆ.

ಇಸ್ರೇಲ್ ಗೆ ಬೆಂಬಲವಾಗಿ ನಿಂತಿರುವ ಅಮೆರಿಕಾ, ಇರಾನ್ ನ ಅಣುಸ್ಥಾವರಗಳ ಮೇಲೆ ಭಾರೀ ದಾಳಿ ಮಾಡಿದೆ. ಇದರಿಂದ ಇರಾನ್ ಗೆ ಸಾಕಷ್ಟು ಹಾನಿಯಾಗಿದೆ. ಹಾಗಿದ್ದರೂ ಇದನ್ನು ಇರಾನ್ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ. ಆದರೆ ತನ್ನ ಪ್ರಮುಖ ಸ್ಥಾವರಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಇರಾನ್ ಪ್ರತೀಕಾರಕ್ಕೆ ಮುಂದಾಗಿದೆ.

ಹೊರ್ಮುಜ್ ಜಲಸಂಧಿ ಮೂಲಕ ವಿಶ್ವದ ಶೇ.20 ರಷ್ಟು ಅನಿಲ ಸರಬರಾಜು ನಡೆಯುತ್ತದೆ. ಇದೀಗ ಪ್ರತೀಕಾರವಾಗಿ ಇರಾನ್ ಜಲಸಂಧುವನ್ನು ಬಂದ್ ಮಾಡಲು ಸಜ್ಜಾಗಿದೆ. ಈ ಮಾರ್ಗ ಬಂದ್ ಆದರೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಲಿದೆ. ಅದು ಭಾರತದ ಮೇಲೂ ತಟ್ಟಬಹುದು.

ಆದರೆ ಭಾರತದ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಹೊರ್ಮುಜ್ ಮಾರ್ಗ ಬಂದ್ ಆದರೂ ಭಾರತ ಬೇರೆ ಮಾರ್ಗಗಳ ಮೂಲಕ ತೈಲ ಆಮದು ಮಾಡಿಕೊಳ್ಳಲಿದೆ. ಇದರಿಂದ ದೇಶಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಹೊರ್ಮುಜ್ ಜಲಸಂಧಿ ಪರ್ಶಿಯನ್ ಕೊಲ್ಲಿಯಿಂದ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗಲ್ಫ್ ರಾಷ್ಟ್ರದಿಂದ ವಿವಿಧ ದೇಶಗಳಿಗೆ ಈ ಮಾರ್ಗದ ಮೂಲಕವೇ ತೈಲ ಸರಬರಾಜು ನಡೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ನ ಸರ್ವನಾಶಕ್ಕೆ ಕಾರಣವಾಗಿದ್ದು ಒಬ್ಬ ಮಹಿಳೆ, ಯಾರೀಕೆ

ಇರಾನ್ ಇಸ್ರೇಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ನಗಲೂ ಆಗದ ಅಳಲೂ ಆಗದ ಸ್ಥಿತಿ

Karnataka Weather: ಈ ವಾರ ಮಳೆಯಿದೆಯೇ, ಎಲ್ಲೆಗೆ ಹೆಚ್ಚು ಮಳೆ ಇಲ್ಲಿದೆ ಹವಾಮಾನ ವರದಿ

ರಾಜಾ ರಘುವಂಶಿ ಪ್ರಕರಣ: ಸೋನಮ್ ಜತೆ ಸಂಪರ್ಕದಲ್ಲಿದ್ದ ಮತ್ತಿಬ್ಬರು ಅರೆಸ್ಟ್‌, ಇವರ ಪಾತ್ರವೇನು ಗೊತ್ತಾ

ದೊಡ್ಡ ದುರಂತ ಬೆನ್ನಲ್ಲೇ ಏರ್‌ ಇಂಡಿಯಾಗೆ ಬಾಂಬ್ ಬೆದರಿಕೆ: ನವದೆಹಲಿಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ

ಮುಂದಿನ ಸುದ್ದಿ
Show comments