ಮಗ್ಗಿ ಹೇಳಲು ಬರುವುದಿಲ್ಲವೆಂಬ ಎಂಬ ಕಾರಣಕ್ಕೆ ಕೋಪಗೊಂಡ ಪಾಪಿ ತಂದೆಯೊಬ್ಬ 6 ವರ್ಷದ ಮಗಳ ಬಾಯಿಗೆ ಈರುಳ್ಳಿ ತುರುಕಿ ಕೊಲೆಗೈದ ಆಘಾತಕಾರಿ ಘಟನೆ ಔರಂಗಾಬಾದ್ ಸಮೀಪದ ಬಲಾಪುರ ಗ್ರಾಮದಲ್ಲಿ ನಡೆದಿದೆ.
ಜುಲೈ ಒಂಬತ್ತರಂದು ಘಟನೆ ನಡೆದಿದ್ದು, ಸೋಮವಾರ ರಾತ್ರಿ ಆರೋಪಿ ರಾಜು ಕುಟೆ ಯನ್ನು ಬಂಧಿಸಲಾಗಿದೆ ಎಂದು ಚಿಕಲ್ಥಾನಾ ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿ ಭಾರತಿ ಒಂದನೇ ತರಗತಿಯಲ್ಲಿ ಓದುತ್ತಿದ್ದಳು.
ಭಾರತಿ ಒಂದರಿಂದ 12ರವರೆಗಿನ ಸಂಖ್ಯೆಗಳನ್ನು ಸರಿಯಾಗಿ ಹೇಳಿದಳು. ಆದರೆ ಆ ಬಳಿಕ ಎಡವಿದಳು. ಇದಕ್ಕೆ ಕೋಪಗೊಂಡ ರಾಜು
ಆಕೆಯ ಬಾಯಲ್ಲಿ ಈರುಳ್ಳಿ ತುರುಕಿದ. ಅದು ಆಕೆಯ ಗಂಟಲಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಉಸಿರುಗಟ್ಟಿದ್ದರಿಂದ ಕೆಲವೇ ಕ್ಷಣದಲ್ಲಿ ಆಕೆ ಸಾವನ್ನಪ್ಪಿದಳು.
ನಂತರ ಮಗಳ ಶವವನ್ನು ಸಮೀಪದಲ್ಲಿಯೇ ಇದ್ದ ಸ್ಮಶಾನದಲ್ಲಿ ಆತ ಹೂತು ಹಾಕಿದ ಎಂದು ಘಟನೆಯ ಪ್ರತ್ಯಕ್ಷದರ್ಶಿ, ತಾಯಿ ಪತಿಯ ವಿರುದ್ಧ ದೂರು ನೀಡಿದ್ದಾಳೆ.
ಮೃತಳ ತಾಯಿ, ಆರೋಪಿಯ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ರಾಜುವನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ವಿಭಾಗ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷಗಳನ್ನು ಮುಚ್ಚಿಹಾಕುವುದು ಅಥವಾ ಅಪರಾಧದ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.