Select Your Language

Notifications

webdunia
webdunia
webdunia
webdunia

ವಿಷ ಕುಡಿದು ಠಾಣೆಗೆ ಬಂದ; ಬದುಕುಳಿಯಲಿಲ್ಲ

ವಿಷ
ಮುಳಬಾಗಿಲು , ಬುಧವಾರ, 13 ಜುಲೈ 2016 (07:55 IST)
ಆಸ್ತಿ ವಿವಾದದಿಂದ ಬೇಸತ್ತ ವ್ಯಕ್ತಿಯೊಬ್ಬ ವಿಷ ಸೇವಿಸಿ ಪೊಲೀಸ್ ಠಾಣೆಗೆ ಬಂದ ಘಟನೆ ಮುಳಬಾಗಿಲು ನಗರದ 
ಚೋಳಗುಂಟೆಯಲ್ಲಿ ನಡೆದಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತಾದರೂ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನನ್ನು ಈರಪ್ಪ ಬೋವಿ(50) ಎಂದು ಗುರುತಿಸಲಾಗಿದೆ. 2-3 ತಿಂಗಳಿನಿಂದ ಈರಪ್ಪ  ಮನೆ ಹಾಗೂ ನಿವೇಶನ ಹಂಚಿಕೆ ಬಗ್ಗೆ ನ್ಯಾಯ ಪಂಚಾಯಿತಿ ಎದುರಿಸುತ್ತಿದ್ದ. ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ, ಬಗೆ ಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ನೊಂದಿದ್ದ ಈರಪ್ಪ ಸೋಮವಾರ ವಿಷ ಸೇವನೆ ಮಾಡಿದ್ದಾನೆ. ಬಳಿಕ ನನಗೆ ನ್ಯಾಯ ಕೊಡಿಸಿ ಎಂದು ಮುಳಬಾಗಿಲು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.  
 
ತಕ್ಷಣ ಆತನನ್ನು ಆಸ್ಪತ್ಪೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ದಾರಿ ಮಧ್ಯೆ ಆತ ಮೃತ ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಮೃತನ ಪತ್ನಿ ಚಂದ್ರಮ್ಮ ನೀಡಿದ ದೂರಿನ ಆಧಾರದ ಮೇಲೆ ಗ್ರಾಮದ ದಲಿತ ಮುಖಂಡ ಚಲಪತಿ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿನ ಬಳಿಕವೂ ನಿಲ್ಲದ "ಶಕ್ತಿಮಾನ್" ರಾಜಕೀಯ