Webdunia - Bharat's app for daily news and videos

Install App

ಚೀನಾ ವಿರುದ್ಧ ಹೋರಾಟಕ್ಕೆ ಭಾರತ ಪರ ನಿಂತ ಜಪಾನ್

Webdunia
ಶುಕ್ರವಾರ, 18 ಆಗಸ್ಟ್ 2017 (16:39 IST)
ದೊಕ್ಲಾಮ್`ನಲ್ಲಿ ಎರಡು ತಿಂಗಳಿನಿಂದ ಏರ್ಪಟ್ಟಿರುವ ಭಾರತ ಮತ್ತು ಚೀನಾ ನಡುವಿನ ಪ್ರಕ್ಷುಬ್ದ ವಾತಾವರಣಕ್ಕೆ ಸಂಬಂಧಿಸಿದಂತೆ ಜಪಾನ್ ದೇಶ ಭಾರತಕ್ಕೆ ಬೆಂಬಲ ಸೂಚಿಸಿದೆ.
 

ದೊಕ್ಲಾಮ್, ಚೀನಾ ಮತ್ತು ಭೂತಾನ್ ದೇಶಗಳ ವಿವಾದಿತ ಪ್ರದೇಶವಾಗಿದೆ. ಬಲಪ್ರಯೋಗದಿಂದ ಸ್ಥಿತಿ ಬದಲಾಣೆಣೆಗೆ ಯತ್ನಿಸುವುದು ಸರಿಯಲ್ಲ. ಶಾಂತಿಯುತ ವಾತಾವರಣದ ಮೂಲಕ ಸಮಸ್ಯೆ ಬಗ್ಗೆಹರಿಸಿಕೊಳ್ಳಬೇಕು. ಇದರಲ್ಲಿ ಭಾರತದ ನಿರ್ಧಾರ ಸರಿಯಾಗಿದೆ ಎಂದು ಜಪಾನ್ ರಾಯಭಾರಿ ಕೆಂಜಿ ಹಿರಾಮಟ್ಸು ಹೇಳಿದ್ದಾರೆ.

ದೊಕ್ಲಾಮ್ ವಿವಾದವನ್ನ ಜಪಾನ್ ತೀರಾ ಹತ್ತರದಿಂದ ಗಮನಿಸುತ್ತಿದ್ದು, ಪರಿಸ್ಥಿತಿ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ. ಭೂತಾನ್ ಜೊತೆಗಿನ ದ್ವಿಪಕ್ಷೀಯ ಒಪ್ಪಂದದ ಅನುಸಾರವಾಗಿ ಭಾರತ ಸೇನೆಯನ್ನ ನಿಯೋಜಿಸಿದೆ. ಈ ಕುರಿತಂತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಿರುವುದಾಗಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ರಾಜತಾಂತ್ರಿಕವಾಗಿ ಎರಡೂ ದೇಶಗಳೂ ಒಪ್ಪುವಂತಹ ಶಾಂತಿಯುತ ನಿರ್ಣಯ ಕೈಗೊಳ್ಳಲು ಮುಂದಾಗಿರುವ ಭಾರತದ ನಿರ್ಧಾರ ಸರಿಯಾಗಿದೆ ಎಂದು ಅವರು ಹೇಳಿದ್ಧಾರೆ.

 ಜೂನ್`ನಲ್ಲಿ ವಿವಾದಿತ ದೊಕ್ಲಾಮ್ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಭಾರತ ಅಲ್ಲಿ ಸೇನಾ ಜಮಾವಣೆ ಮಾಡಿ ಚೀನಾವನ್ನ ಹಿಮ್ಮೆಟ್ಟಿಸಿತ್ತು. ವಿವಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಭಾರತ ವಿರೋಧಿಸಿತ್ತು. ಈ ವಿವಾದವನ್ನ ಮಾತುಕತೆ ಮೂಲಕ ಬಗೆಹರಿಸಿಕೊಳ್ಲಲು ಭಾರತ ಸಿದ್ಧವಿದ್ದರೂ ಸಹ ಚೀನಾ ಒತ್ತಡ ಮತ್ತು ಯುದ್ಧದ ಬೆದರಿಕೆ ಮೂಲಕ ಮಣಿಸುವ ತಂತ್ರ ಮಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

JEE Main Result 2025: JEE Main ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ ಇಲ್ಲಿ ನೋಡಿ

ಅನುಭವ ಮಂಟಪ ಮುಗಿಸಲು ನಿಮ್ಮ ಡಿ.ಕೆ.ಶಿವಕುಮಾರ್ ಬಿಡುತ್ತಾರಾ: ಬಿ.ವೈ.ವಿಜಯೇಂದ್ರ

CET exam: ಬ್ರಾಹ್ಮಣರ ಜನಿವಾರ ತೆಗೆಸಿದ್ದು ನಿಜ ಆದ್ರೆ ಕ್ರಮ ಕೈಗೊಳ್ತೀವಿ: ಸಚಿವ ಡಾ ಎಂಸಿ ಸುಧಾಕರ್

West Bengal: ಪಶ್ಚಿಮ ಬಂಗಾಲ ಹಿಂಸಾಚಾರದಲ್ಲಿ ಮೂಗುತೂರಿಸಿದ ಬಾಂಗ್ಲಾದೇಶ: ನಿಮ್ದು ನೀವು ನೋಡ್ಕೊಳ್ಳಿ ಎಂದ ಭಾರತ

Arecanut price today: ಅಡಿಕೆ, ಕಾಳುಮೆಣಸಿಗೆ ಬೆಲೆ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments