Webdunia - Bharat's app for daily news and videos

Install App

ಸಿರಿಯಾ ಸರ್ವಾಧಿಕಾರಿಯ ಕಿತ್ತೊಗೆಯಲು ಮೂಲ ಕಾರಣವಾಗಿದ್ದು 14 ವರ್ಷದ ಯುವಕ, ಹೇಗೆ ಇಲ್ಲಿದೆ ವಿವರ

Krishnaveni K
ಸೋಮವಾರ, 9 ಡಿಸೆಂಬರ್ 2024 (10:12 IST)
Photo Credit: X
ಡಮಾಸ್ಕಸ್: ಸಿರಿಯಾದಲ್ಲಿ ಬಂಡುಕೋರರು ನಡೆಸಿದ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿದೆ. ಸರ್ವಾಧಿಕಾರಿ ಬಷರ್ ಅಸಾದ್ ದೇಶ ಬಿಟ್ಟು ಪಲಾಯನ ಮಾಡಿದ್ದು ಡಮಾಸ್ಕಸ್ ಬಂಡುಕೋರರ  ವಶವಾಗಿದೆ.

ಕಳೆದ 12 ವರ್ಷಗಳಿಂದ ಬಷದ್ ಅಸಾದ್ ಸರ್ವಾಧಿಕಾರ ವಿರೋಧಿಸಿ ಮೂಲಭೂತವಾದಿ ಹಯಾತ್ ತಹ್ರೀರ್ ಅಲ್-ಶಾಮ್ ಸಂಘಟನೆ ನೇತೃತ್ವದಲ್ಲಿ ಆಂತರಿಕ ಯುದ್ಧ ನಡೆಸುತ್ತಲೇ ಇತ್ತು. ಸಿರಿಯಾದ ಒಂದೊಂದೇ ನಗರಗಳನ್ನು ವಶಪಡಿಸಿಕೊಳ್ಳುತ್ತಾ ಬಂದ ಬಂಡುಕೋರರು ಇದೀಗ ಡಮಾಸ್ಕಸ್ ನ್ನು ವಶಪಡಿಸಿ ಸಿರಿಯಾವನ್ನು ಸರ್ವಾಧಿಕಾರಿ ಆಡಳಿತದಿಂದ ಮುಕ್ತಿಗೊಳಿಸಿದ್ದಾರೆ.

ಈ ಮೂಲಕ ಅಸಾದ್ ಮತ್ತು ಅವರ ತಂದೆ ಸೇರಿದಂತೆ 54 ವರ್ಷದ ಸರ್ವಾಧಿಕಾರದ ಆಡಳಿತಕ್ಕೆ ತೆರೆ ಬಿದ್ದಿದೆ. ಅಸಾದ್ ತಂದೆ ಅತ್ಯಂತ ಕ್ರೂರ ಆಡಳಿತಗಾರನಾಗಿದ್ದರು. ಅವರ ಬಳಿಕ ಬಂದ ಅಸಾದ್ ಮೊದಲು ಕೊಂಚ ಸುಧಾರಣಾವಾಧಿಯಂತೆ ಇದ್ದರೂ ಬಳಿಕ ಅವರೂ ತಂದೆಯ ಹಾದಿ ಹಿಡಿದರು. ತಮ್ಮ ಆಡಳಿತವನ್ನು ಪ್ರಶ್ನಿಸಿದವರನ್ನು ಮುಲಾಜಿಲ್ಲದೇ ಕತ್ತಲ ಕೋಣೆಯಲ್ಲಿಟ್ಟು ಥಳಿಸಿ ಕೊನೆಗೆ ನೇಣಿಗೆ ಹಾಕುತ್ತಿದ್ದರು. ಇದೇ ರೀತಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನು ಅಸಾದ್ ನೇಣುಗಂಬಕ್ಕೇರಿಸಿದ್ದಾನೆ ಎನ್ನಲಾಗಿದೆ.

ಈ ಸರ್ವಾಧಿಕಾರದ  ವಿರುದ್ಧ ದಂಗೆಯೇಳಲು ಮೂಲ ಕಾರಣವಾಗಿದ್ದು 14 ವರ್ಷದ ಮೊಯಿನ್ ಸ್ಯಾಸ್ನೇಹ್ ಎಂಬ ಬಾಲಕ. ಸರ್ವಾಧಿಕಾರೀ ಆಡಳಿತದಿಂದ ಬೇಸತ್ತಿದ್ದ ಆತ ಗೋಡೆಯ ಮೇಲೆ ನಿಮ್ಮ ಸಮಯ ಬಂದಿದೆ ಡಾಕ್ಟರ್ ಎಂದು ನೇತ್ರ ತಜ್ಞನಾಗಿರುವ ಅಸಾದ್ ಕುರಿತು ಬರೆದಿದ್ದ.

ಇದರಿಂದ ರೊಚ್ಚಿಗೆದ್ದ ಅಸಾದ್ ಮೊಯಿನ್ ಮತ್ತು ಸ್ನೇಹಿತರನ್ನು 26 ದಿನಗಳ ಬಂಧಿಸಿ ಚಿತ್ರಹಿಂಸೆ ನೀಡಿತ್ತು. ಇದುವೇ ದಂಗೆಗೆ ಮೂಲ ಕಾರಣವಾಯಿತು 2011 ರ ಮಾರ್ಚ್ ನಲ್ಲಿ ಆರಂಭವಾದ ದಂಗೆ ಇಂದು ಕೊನೆಯಾಗಿದ್ದು, ಸಿರಿಯಾ ಈಗ ಬಂಡುಕೋರರ ವಶವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ-ಮ್ಯಾಂಚೆಸ್ಟರ್ ಮಾರ್ಗದಲ್ಲಿ ವಿಮಾನಯಾನ ಹೆಚ್ಚಿಸಿದ ಇಂಡಿಗೋ ಏರ್‌ಲೈನ್ಸ್‌

ಭಟ್ಕಳ: ಅಲೆಗಳ ಅಬ್ಬರಕ್ಕೆ ಮಗುಚಿದ ನಾಡದೋಣಿ, ನಾಲ್ವರು ಸಾವು

ನಾಸಾ-ಇಸ್ರೋ ನಿಸಾರ್ ಉಪಗ್ರಹ: ನಭಕ್ಕೆ ಚಿಮ್ಮಿದ ನಿಸಾರ್ ಮಾಡಲಿದೆ ಈ ಅಧ್ಯಯನ

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಣ್ಣಾಮಲೈಗೆ ಮುಂದಿನ ಎಲೆಕ್ಷನ್‌ನಲ್ಲೂ ಟಿಕೆಟ್‌ ಡೌಟ್‌, ಕಾರಣ ಇಲ್ಲಿದೆ

ಧರ್ಮಸ್ಥಳ ಉತ್ಖನನ ವೇಳೆ ಕಂಡಿದ್ದೇನು: ಬಿಗ್ ಟ್ವಿಸ್ಟ್

ಮುಂದಿನ ಸುದ್ದಿ
Show comments