ಅಮೆರಿಕಾ ಅಧ್ಯಕ್ಷರಾದ ಬೆನ್ನಲ್ಲೇ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಶಾಕ್: ಬದಲಾಗಲಿದೆ ಪೌರತ್ವ ನಿಯಮ

Krishnaveni K
ಗುರುವಾರ, 7 ನವೆಂಬರ್ 2024 (11:35 IST)
Photo Credit: X
ವಾಷಿಂಗ್ಟನ್: ಅಮೆರಿಕಾದ ನೂತನ ಅಧ್ಯಕ್ಷರಾದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರೂ ಸೇರಿದಂತೆ ಅಲ್ಲಿನ ಪೌರತ್ವ ಪಡೆದಿರುವ ವಿದೇಶೀ ದಂಪತಿಗಳಿಗೆ ಶಾಕ್ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಿನ್ನೆಯಷ್ಟೇ ಭಾರತೀಯ ಮೂಲದ ಕಮಲಾ ಹ್ಯಾರಿಸ್ ರನ್ನು ಸೋಲಿಸಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರ ಪದಗ್ರಹಣಕ್ಕೆ ಮುನ್ನ ಅನಿವಾಸಿ ಭಾರತೀಯರಿಗೆ ಶಾಕ್ ಕಾದಿದೆ. ತಾವು ಅಧಿಕಾರಕ್ಕೇರಿದ ನಂತರ ಟ್ರಂಪ್ ಪೌರತ್ವ ನಿಯಮದಲ್ಲಿ ಬದಲಾವಣೆ ತರಲು ಹೊರಟಿದ್ದಾರೆ. ಇದರಿಂದ ನೂರಾರು ಭಾರತೀಯ ದಂಪತಿಗಳು ತೊಂದರೆಗೆ ಸಿಲುಕಲಿದ್ದಾರೆ.

ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸೇರಿದಂತೆ ವಿದೇಶೀ ಪ್ರಜೆಗಳ ಮಕ್ಕಳಿಗೆ ಅಟೋಮೇಟಿಕ್ ಸಿಟಿಜೆನ್ ಶಿಪ್ ನೀಡುವ ನಿಯಮಕ್ಕೆ ಕತ್ತರಿ ಹಾಕಲು ಟ್ರಂಪ್ ತೀರ್ಮಾನಿಸಿದ್ದಾರೆ. ಇದು ತಾವು ಅಧಿಕಾರಕ್ಕೇರಿದ ಮೊದಲ ದಿನವೇ ಜಾರಿಗೆ ತರಲು ಅವರು ಯೋಜನೆ ರೂಪಿಸಿದ್ದಾರಂತೆ.

ಈ ನಿಯಮದ ಅನ್ವಯ ಪೋಷಕರಲ್ಲಿ ಒಬ್ಬರು ಅಮೆರಿಕಾದ ಖಾಯಂ ನಿವಾಸಿಯಾಗಿರಬೇಕು ಅಥವಾ ತಮ್ಮ ಮಕ್ಕಳಿಗಾಗಿ ಕಾನೂನಾತ್ಮಕವಾಗಿ ಅಮೆರಿಕಾ ನಿವಾಸಿಯಾಗಿರಬೇಕು ಎಂದು ಹೊಸ ನಿಯಮದಲ್ಲಿ ತಿದ್ದುಪಡಿಯಾಗಲಿದೆ. ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ನಿಯಮದ ಪ್ರಕಾರ ಅಮೆರಿಕಾದಲ್ಲಿ ಜನಿಸಿದ ಮಾತ್ರಕ್ಕೆ ಮಕ್ಕಳಿಗೆ ಅಟೋಮೇಟಿಕ್ ಆಗಿ ಅಲ್ಲಿನ ನಾಗರಿಕತ್ವ ಸಿಗದು.

ಭಾರತೀಯರಿಗೆ ಇದು ಹೇಗೆ ಪರಿಣಾಮ ಬೀರಲಿದೆ?
ಅಮೆರಿಕಾದಲ್ಲಿ ಪ್ರಸಕ್ತ 4.8 ಮಿಲಿಯನ್ ಭಾರತೀಯರಿದ್ದಾರೆ. ಈ ಪೈಕಿ ಶೇ.34 ರಷ್ಟು ಮಂದಿ ಅಮೆರಿಕಾದಲ್ಲೇ ಜನಿಸಿದವರಾಗಿದ್ದಾರೆ. ಒಂದು ವೇಳೆ ಟ್ರಂಪ್ ಹೊಸ ನಿಯಮ ಜಾರಿಗೆ ತಂದರೆ ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ.  ಈ ನಿಯಮ ಜಾರಿಗೆ ಬಂದರೆ ಅಮೆರಿಕಾ ಖಾಯಂ ನಿವಾಸಿಯಾಗಿರದ ಅಥವಾ ಗ್ರೀನ್ ಕಾರ್ಡ್ ಇಲ್ಲದ ಭಾರತೀಯ ದಂಪತಿಗೆ ಜನಿಸಿದ ಮಕ್ಕಳು ಅಟೋಮೇಟಿಕ್ ಆಗಿ ಅಮೆರಿಕಾ ನಾಗರಿಕತ್ವ ಪಡೆಯಲು ಅನರ್ಹರಾಗಿರುತ್ತಾರೆ. ಹೀಗಾಗಿ ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ಈ ನಿಯಮ ನೇರವಾಗಿ ಭಾರತೀಯರ ಮೇಲೆ ಪರಿಣಾಮ ಬೀರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಮೀಕ್ಷೆಯಿಂದಾಗಿ ಮಕ್ಕಳ ಕಲಿಕೆಗೆ ಭಾರೀ ಪೆಟ್ಟು: ವಿಜಯೇಂದ್ರ ಆಕ್ರೋಶ

ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ತಾಯಿ, ಪತಿಯ ಈ ಬೆದರಿಕೆಯೇ ಕಾರಣವಾಯಿತೇ

ಅಶ್ರಫ್ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಭರತ್‌ಗೆ ಬಿಗ್ ಶಾಕ್

ಐಷರಾಮಿ ಕಾರಿಗೆ ಬೇಡಿಕೆಯಿಟ್ಟ ಮಗ, ಕಬ್ಬಿಣದ ಸರಳಿನಿಂದ ಹೊಡೆದ ಅಪ್ಪನ ವಿರುದ್ಧ ಬಿತ್ತು ದೊಡ್ಡ ಕೇಸ್

ಬೆಂಗಳೂರಿನಲ್ಲಿ ಟ್ರಾಫಿಕ್ ಇರೋದು ಒಳ್ಳೇದು ಅನ್ನೋದಾ ಸಚಿವ ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments