Webdunia - Bharat's app for daily news and videos

Install App

ಕೋಟಿ ಕೋಟಿ ಬೆಲೆಯ ದುಬಾರಿ ಮೀನು:ಈ ಮೀನು ಹಿಡಿದರೆ ಜೈಲೇ ಗತಿ!

Webdunia
ಬುಧವಾರ, 27 ಅಕ್ಟೋಬರ್ 2021 (17:48 IST)
ಲಂಡನ್ : ಫಿಶ್ ಮಾರುಕಟ್ಟೆಯಲ್ಲಿ ಜಗತ್ತಿನ ಅತ್ಯಂತ ದುಬಾರಿ ಮೀನು ಯಾವುದು ಅಂತಾ ನಿಮ್ಗೆ ಗೊತ್ತಾ? ಹಾಗಾದ್ರೆ ಅದ್ಯಾವುದು ಕೋಟಿ ಕೋಟಿ ಬೆಲೆಬಾಳುವ ದುಬಾರಿ ಮೀನು ಅಂತೀರಾ?
ಹಾಗಾದ್ರೆ ನಾವೇ ಹೇಳೋಕೆ ಹೊರಟಿರುವ ವಿನಾಶದ ಅಂಚಿನಲ್ಲಿರುವ ದುಬಾರಿ ಮೀನು ಯಾವುದೆಂದರೆ "ಅಟ್ಲಾಂಟಿಕ್ ಬ್ಲೂಫಿನ್ ಟ್ಯುನ" ಮೀನುಗಳು. ಅಕ್ಟೋಬರ್ 23ರಂದು ಯುಕೆಯ ಕೋಸ್ಟ್ ಆಫ್ ಕಾರ್ನವಾಲ್ ನಲ್ಲಿ ಬ್ಲೂಫಿನ್ ಟ್ಯೂನ್ ಮೀನುಗಳ ಹಿಂಡು ಪ್ರತ್ಯಕ್ಷವಾಗಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ನಗರದಾದ್ಯಂತ ಹಬ್ಬಿತು. ಹಲವು ವರ್ಷಗಳಿಂದ ಕಂಡಿರದ ಮೀನುಗಳು ಪ್ರತ್ಯಕ್ಷವಾಗಿದ್ದಕ್ಕೆ ಅಲ್ಲಿಯ ಜನ ನೋಡಲು ಕಡಲಂಚಿನಲ್ಲಿ ಜಮಾಯಿಸಿದ್ದರು.
ಮೀನು ದುಬಾರಿಯಾಗಲು ಏನು ಕಾರಣ?
ಯುರೋಪಿನಾದ್ಯಂತ ಅಟ್ಲಾಂಟಿಕ್ ಬ್ಲೂಫಿನ್ ಟ್ಯೂನ್ ಮೀನಿನ ಬೆಲೆ ಲಕ್ಷಾಂತರ ಫೌಂಡ್ ಗಳಲ್ಲಿದೆ. ಆದರೆ, ಈ ಮೀನಿಗೆ ಗಾಳ ಹಾಕುವುದು, ಮಾರಾಟ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದ್ರೆ, ಈ ಮೀನನ್ನು ಹಿಡಿಯುವುದು ಹಾಗೂ ಮಾರಾಟ ಮಾಡುವುದು ಬ್ರಿಟನ್ ನಲ್ಲಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಬ್ರಿಟಿಷ್ ಕರೆನ್ಸಿಯನ್ನು ಭಾರತದ ರೂಪಾಯಿಗೆ ಪರಿವರ್ತಿಸಿದರೆ ಈ ಮೀನಿನ ಬೆಲೆ 23 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಬ್ಲೂಫಿನ್ ಟ್ಯೂನ್ ಮೀನಿನ ವಿಶೇಷತೆ
ಈ ಮೀನಿಗೆ ಸಂಬಂಧಿಸಿದ ಅನೇಕ ವಿಚಾರಗಳು ಆಸಕ್ತಿದಾಯಕವಾಗಿವೆ. ಟ್ಯೂನ್ ಜಾತಿಯ ಮೀನಿನ ಗಾತ್ರ ತುಂಬಾನೆ ದೊಡ್ಡದಾಗಿರುತ್ತದೆ. ಇದು ಅಷ್ಟೇ ವೇಗವಾಗಿ ಸಹ ಈಜುತ್ತದೆ. ಟ್ಯೂನ್ ಮತ್ಸ್ಯಗಳು ಸಾಮಾನ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡಲ್ಲ.
ಅಟ್ಲಾಂಟಿಕ್ ಬ್ಲೂಫಿನ್ ಟ್ಯೂನ್ ಮೀನುಗಳು ಕಳೆದ ನೂರು ವರ್ಷಗಳಿಂದ ಯುಕೆಯ ಕೋಸ್ಟ್ ಆಫ್ ಕಾರ್ನವಾಲ್ ನಲ್ಲಿ ಕಾಣಿಸಿಕೊಂಡಿಲ್ಲ ಅಂತಾ ಹೇಳಲಾಗುತ್ತಿದೆ. ಸದ್ಯ ಯೂರೋಪಿನಲ್ಲಿ ಬೇಸಿಗೆ ಇರೋದ್ರಿಂದ ಕಡಲಂಚಿಗೆ ಈ ಮೀನುಗಳು ಬರಲು ಕಾರಣ ಎನ್ನಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟು

ನನ್ನನ್ನು ಕೆಳಗಿಳಿಸಲು ದೆಹಲಿಯಲ್ಲಿ ವ್ಯವಸ್ಥಿತವಾದ ಸಂಚು ನಡೆದಿದೆ: ಕೆಎನ್‌ ರಾಜಣ್ಣ ‌ಕಿಡಿ

ಸ್ವಾತಂತ್ರ್ಯ ದಿನಾಚರಣೆಯಂದೆ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ ನೀಡಿದ ಆಂಧ್ರ ಸಿಎಂ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments