Webdunia - Bharat's app for daily news and videos

Install App

'ಅವರ ಶಾಂತಿ ಸಂದೇಶವನ್ನು ಪಾಲಿಸೋಣ': ಆಂಟೋನಿಯೊ ಗುಟೆರಸ್

Webdunia
ಶನಿವಾರ, 2 ಅಕ್ಟೋಬರ್ 2021 (08:48 IST)
ವಿಶ್ವಸಂಸ್ಥೆ : ಮಹಾತ್ಮಾ ಗಾಂಧಿ ಅವರ ಜನ್ಮ ದಿನದಂದು ಅಕ್ಟೋಬರ್ 2 ರಂದು ವಾರ್ಷಿಕವಾಗಿ ಆಚರಿಸಲಾಗುವ ಅಂತಾರಾಷ್ಟ್ರೀಯ ಅಹಿಂಸಾ ದಿನದ ಸಂದರ್ಭದಲ್ಲಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ  ಆಂಟೋನಿಯೊ ಗುಟೆರಸ್ ಅವರು 'ಶಾಂತಿ ಮತ್ತು ಸಹಿಷ್ಣುತೆಯ ಹೊಸ ಯುಗಕ್ಕೆ ನಾಂದಿ ಹಾಡುವ' ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಶಾಂತಿ ಕಾರ್ಯಕರ್ತನ ಅಹಿಂಸೆಯ ಸಂದೇಶಕ್ಕೆ ಕಿವಿಗೊಡುವಂತೆ ದೇಶಗಳನ್ನು ಒತ್ತಾಯಿಸಿದರು.

'ದ್ವೇಷ, ವಿಭಜನೆ  ಮತ್ತು ಸಂಘರ್ಷಗಳು ತಮ್ಮ ದಿನವನ್ನು ಹೊಂದಿವೆ. ಶಾಂತಿ, ಸತ್ಯ ಮತ್ತು ಸಹಿಷ್ಣುತೆಯ  ಹೊಸ ಯುಗಕ್ಕೆ ನಾಂದಿ ಹಾಡುವ ಸಮಯ ಇದು. ಈ ಅಂತಾರಾಷ್ಟ್ರೀಯ ಅಹಿಂಸಾ ದಿನದಂದು ಗಾಂಧಿ ಅವರ ಜನ್ಮದಿನದಂದು- ಅವರ ಶಾಂತಿ ಸಂದೇಶಕ್ಕೆ ಕಿವಿಗೊಡೋಣ ಮತ್ತು ಎಲ್ಲರಿಗೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿರೋಣ' ಎಂದು ಗುಟೆರಸ್ ಶನಿವಾರ ಟ್ವೀಟ್ ಮಾಡಿದ್ದಾರೆ.
ಮಹಾತ್ಮಾ ಗಾಂಧಿ ಅಕ್ಟೋಬರ್ 2, 1869 ರಂದು ಗುಜರಾತಿನ ಪೋರ್ ಬಂದರ್ ನಲ್ಲಿ ಜನಿಸಿದ ರು, ಈ ವರ್ಷವು ಅವರ 152 ನೇ ಜನ್ಮ ದಿನವನ್ನು ಸೂಚಿಸುತ್ತದೆ. ಅವರ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 15, 2007 ರಂದು ಅಂಗೀಕರಿಸಿತು. ಭಾರತದಲ್ಲಿ 'ರಾಷ್ಟ್ರದ ಪಿತಾಮಹ' ಎಂದು ಕರೆಯಲ್ಪಡುವ ಗಾಂಧಿಯವರ ಬೋಧನೆಗಳ ಸಹಾಯದಿಂದ ಶಾಂತಿ, ಸಹಿಷ್ಣುತೆ ಮತ್ತು ತಿಳುವಳಿಕೆಯ ಸಂಸ್ಕೃತಿಯನ್ನು ಪಡೆಯುವ ಗುರಿಯೊಂದಿಗೆ ಈ ನಿರ್ಣಯವನ್ನು ಅಂಗೀಕರಿಸಲಾಯಿತು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments