Select Your Language

Notifications

webdunia
webdunia
webdunia
webdunia

ಗಂಡನ ಮೇಲಿನ ಸಿಟ್ಟಿಗೆ ಅವನ ಗೆಳೆಯನೊಂದಿಗೆ ರತಿಕ್ರೀಡೆ ಮಾಡಿ ತಪ್ಪು ಮಾಡಿಬಿಟ್ಟೆ!

ಗಂಡನ ಮೇಲಿನ ಸಿಟ್ಟಿಗೆ ಅವನ ಗೆಳೆಯನೊಂದಿಗೆ ರತಿಕ್ರೀಡೆ ಮಾಡಿ ತಪ್ಪು ಮಾಡಿಬಿಟ್ಟೆ!
ಬೆಂಗಳೂರು , ಬುಧವಾರ, 27 ಮಾರ್ಚ್ 2019 (12:32 IST)
ಬೆಂಗಳೂರು: ಕೋಪದ ಕೈಯಲ್ಲಿ ಬುದ್ಧಿಕೊಟ್ಟರೆ ಎಂತಹಾ ಅನಾಹುತಗಳಾಗುತ್ತವೆ ಎಂಬುದಕ್ಕೆ ಇದೂ ಒಂದು ನಿದರ್ಶನ. ಗಂಡನ ಮೇಲಿನ ಸಿಟ್ಟಿಗೆ ಅವನ ಗೆಳೆಯನೊಂದಿಗೆ ದೈಹಿಕ ಸಂಪರ್ಕ ಮಾಡಿ ಈಗ ಪಶ್ಚಾತ್ತಾಪ ಪಡುವ ಹೆಣ್ಣಿಗೆ ಏನು ಹೇಳೋದು?


ಪತಿ-ಪತ್ನಿಯರ ನಡುವಿನ ಹಾಸಿಗೆ ವಿಚಾರದ ಅಸಮಾಧಾನ ಜಗಳದಲ್ಲಿ ಅಂತ್ಯವಾಗಿ ಕೊನೆಗೆ ಗಂಡನ ಸ್ನೇಹಿತನ ಜತೆಗೇ ದೈಹಿಕ ಸಂಬಂಧ ಬೆಳೆಸಿ ಕೊನೆಗೆ ಕೋಪದ ಭರ ಇಳಿದ ಮೇಲೆ ಪಶ್ಚಾತ್ತಾಪ ಪಡುವ ಅದೆಷ್ಟೋ ಹೆಣ್ಣು ಮಕ್ಕಳಿದ್ದಾರೆ.

ಮೊದಲನೆಯದಾಗಿ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಬೇಕು ಎಂಬುದು ಮೊದಲನೆಯ ಪಾಠ. ಎರಡನೆಯದಾಗಿ ತಪ್ಪು ಮಾಡಿದ ಮೇಲೆ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೇಬೇಕು. ನೀವು ಮಾಡಿದ ತಪ್ಪಿನ ಬಗ್ಗೆ ಗಂಡನ ಜತೆ ಹೇಳಿಕೊಂಡಲ್ಲಿ ಪರಿಹಾರ ಸಿಗುತ್ತದೆ ಎಂದಾದರೆ ಹೇಳಿಕೊಂಡರೆ ತಪ್ಪಿಲ್ಲ. ಆದರೆ ಸಮಾಧಾನ ಸಿಗುವ ಬದಲು ಮತ್ತಷ್ಟು ನಿಮ್ಮ ಸಂಬಂಧ ಹಾಳಾಗುತ್ತದೆ ಎಂದಾದರೆ ಹೇಳಿಕೊಳ್ಳದೇ ಅದನ್ನು ಮರೆತು ಇನ್ನಾದರೂ ವಿಧೇಯ ಪತ್ನಿಯಾಗಿ ಬದುಕುವುದು ಉತ್ತಮ.

ಆದರೂ ಮಾಡಿದ ತಪ್ಪು ಕಾಡುತ್ತದೆ ಎಂದಾದರೆ ಕ್ಷಮೆ ಕೇಳಿ. ಕ್ಷಮೆ ಸಿಗದೇ ಇದ್ದರೆ, ಅಂತಹ ಸಂಬಂಧದಿಂದ ಹೊರಬಂದು ಬದುಕುವುದೇ ಉತ್ತಮ. ಇಬ್ಬರೂ ಬಾಧೆ ಪಡುವುದಕ್ಕಿಂತ ಅದುವೇ ಒಳ್ಳೆಯದು. ಆದರೆ ತಪ್ಪು ಎಲ್ಲರೂ ಮಾಡುತ್ತಾರೆ. ಹಾಗಂತ ಅದನ್ನೇ ನೆನೆಸಿಕೊಂಡು ಜೀವನ ಪರ್ಯಂತ ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂಬುದನ್ನ ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹರೆಯದ ಮಗುವಿಗೆ ಗುಪ್ತಾಂಗದ ಮೇಲೆಯೇ ಆಸಕ್ತಿ ಜಾಸ್ತಿ, ಏನು ಮಾಡಲಿ?