Webdunia - Bharat's app for daily news and videos

Install App

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಈ ಮೂರು ಗಿಡಮೂಲಿಕೆಗಳು

Webdunia
ಸೋಮವಾರ, 9 ಆಗಸ್ಟ್ 2021 (12:24 IST)
ಎಲ್ಲ ಋತುಮಾನಗಳಿಗಿಂತ ಮಳೆಗಾಲ ಎಂದರೆ ಎಲ್ಲರಿಗೂ ತುಸು ಪ್ರೀತಿ ಹೆಚ್ಚು. ಮಳೆಗಾಲ ಮತ್ತು ಹಿತವಾದ ಗಾಳಿಯು ನಮ್ಮ ಜೀವನಕ್ಕೆ ಸಂತೋಷ ನೀಡುತ್ತದೆ. ಕಾರಿನ ಗಾಜಿನ ಮೇಲಿನ ಸಣ್ಣ ಮಳೆ ಹನಿಗಳಿಂದ ಹಿಡಿದು ಕೈಯಿಂದ ಮಾಡಿದ ಕಾಗದದ ದೋಣಿಯವರೆಗೆ ಉಲ್ಲಾಸ ನೀಡುವ ಕಾಲ. ಜೊತೆಗೆ ಮಳೆಗಾಲವು ಕೆಲವು ರೋಗಗಳನ್ನು ಸಹ ತರುತ್ತದೆ. ಶೀತ ಕೆಮ್ಮು, ಜ್ವರ ಮತ್ತು ಟೈಫಾಯಿಡ್ ಮಾನ್ಸೂನ್ ನಲ್ಲಿ ಕಾಣುವ ಸಾಮಾನ್ಯ ರೋಗಗಳು.

ವ್ಯಾಪಕವಾದ ಕೋವಿಡ್ -19 ವೈರಸ್ ಬಗ್ಗೆಯೂ ಇತ್ತೀಚಿನದ ಎರಡು ವರ್ಷಗಳಿಂದ ಕಾಳಜಿ ವಹಿಸಬೇಕು. ಹಾಗಾಗಿ ಈ ಸಮಯದಲ್ಲಿ, ನಮ್ಮ ರಕ್ಷಣೆಗೆ ಮೂರು ಉತ್ತಮ ಗಿಡಮೂಲಿಕೆಗಳಿವೆ. ಈ ಗಿಡಮೂಲಿಕೆಗಳು ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ವಿರುದ್ಧ ಹೋರಾಡಲು ಪರಿಹಾರಗಳಾಗಿವೆ.
ಹೌದು, ಈ ಮೂರು ಗಿಡಮೂಲಿಕೆಗಳು ನಮ್ಮ ದೇಹದಲ್ಲಿ ಒಮದು ರೀತಿಯ ಮಾಂತ್ರಿಕ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ.
ತುಳಸಿ
ಇದು ಆಯುರ್ವೇದ ಪದ್ಧತಿಯಲ್ಲಿ ಅತ್ಯುತ್ತಮ ಗಿಡಮೂಲಿಕೆ. ಇದು ಆ್ಯಂಟಿ ಆಕ್ಸಿಡೆಂಟ್ಸ್, ಉರಿಯೂತ ನಿವಾರಕ ಮತ್ತು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಭಾರತದಲ್ಲಿ ದೈವ ಸ್ವರೂಪಿಯಾಗಿ ಕಾಣುವುದರಿಂದ ಇದು ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಪ್ರಾಚೀನ ಕಾಲದಿಂದಲೂ, ಇದು ಜನಪ್ರಿಯವಾಗಿದೆ. ಇದರಲ್ಲಿ ಔಷಧಿ ಗುಣಗಳಿರುವುದರಿಂದ ಇದನ್ನು ದೇಹ, ಮನಸ್ಸು ಮತ್ತು ಚೈತನ್ಯಕ್ಕೆ ಟಾನಿಕ್ ಎಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ನಾವು ಶೀತ ಮತ್ತು ಕೆಮ್ಮಿಗೆ ತುತ್ತಾಗುತ್ತೇವೆ. ತುಳಸಿ ನಮ್ಮ ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರತಿಕಾಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಈ ಕಾಯಿಲೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ತುಳಸಿ ಕೂಡ ಸೂಪರ್ ಫುಡ್. ಇದು ಒತ್ತಡ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ, ಮಳೆಗಾಲದ ದಿನ ಒಂದು ಕಪ್ ಬಿಸಿ ತುಳಸಿ ಚಹಾವು ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಸುಧಾರಿಸುತ್ತದೆ.
ಗಿಲೋಯ್
ಗಿಲೋಯ್ ಅನ್ನು ಸಾಮಾನ್ಯವಾಗಿ ಅದ್ಭುತ ಔಷಧ ಎಂದು ಪರಿಗಣಿಸಲಾಗುತ್ತದೆ. ಇದು ಜ್ವರದ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತವೆ ಮತ್ತು ದೇಹದಲ್ಲಿನ ವಿಷವನ್ನು ತೆಗೆದುಹಾಕುತ್ತವೆ. ಗಿಲೋಯ್ ಹೈಪೋಗ್ಲೈಸಿಮಿಕ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಟೈಪ್ 2 ಡಯಾಬಿಟಿಸ್ಗೆ ಸಹಾಯ ಮಾಡುತ್ತದೆ. ಒಂದು ಕಪ್ ಗಿಲೋಯ್ ಜ್ಯೂಸ್ ನಾವು ಊಹಿಸುವುದಕ್ಕಿಂತ ಹೆಚ್ಚಿನ ರೋಗಗಳನ್ನು ತಡೆಯುತ್ತದೆ. ಇದು ನಮ್ಮ ಚರ್ಮವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ, ಮಾನ್ಸೂನ್ನಲ್ಲಿ ಅತಿಯಾದ ತೇವಾಂಶ, ಧೂಳು ಮತ್ತು ಮಾಲಿನ್ಯದ ನಡುವೆ ಕಾಂತಿಯುತ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ. ಮಾನ್ಸೂನ್ ಆರೋಗ್ಯ ರಕ್ಷಣೆಗೆ ಇದು ಅಸಾಧಾರಣವಾದ ಮೂಲಿಕೆಯಾಗಿದೆ.
ತ್ರಿಕಾಟು/ಅರಿಶಿನ

ಅರಿಶಿನವು ಹಲವಾರು ಸಂಯುಕ್ತಗಳನ್ನು ಹೊಂದಿದ್ದು ಅದು ಪ್ರಪಂಚದ ಅತ್ಯಮೂಲ್ಯ ಅತ್ಯಮೂಲ್ಯ ಗಿಡ. ಇದರಲ್ಲಿನ ಕಕ್ರ್ಯುಮಿನ್ ಪ್ರಮುಖವಾದುದು. ಆಹಾರದಿಂದ ಚರ್ಮದ ಆರೈಕೆಯವರೆಗೆ ನಾವು ಎಲ್ಲೆಡೆ ಅರಿಶಿನವನ್ನು ಬಳಸುತ್ತೇವೆ. ಒಂದು ಲೋಟ ಹಾಲಿನೊಂದಿಗೆ ಅರಿಶಿನ ಪುಡಿ ತೆಗೆದುಕೊಂಡರೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿನ ಗಾಯಗಳನ್ನು ಗುಣಪಡಿಸುತ್ತದೆ. ಮಾನ್ಸೂನ್ ನಲ್ಲಿ ಆದ್ರ್ರತೆಯಿಂದಾಗಿ ನಮ್ಮ ಚರ್ಮವು ಒಣಗುತ್ತದೆ. ಅರಿಶಿನವು ಒಣ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ವರ್ಣದ್ರವ್ಯವನ್ನು ತಡೆಯುತ್ತದೆ. ಇದು ಮೊಡವೆಗಳನ್ನು ಸಹ ತಡೆಯುತ್ತದೆ. ಅರಿಶಿನವು ಸೋಂಕುನಿವಾರಕ ಗುಣಗಳನ್ನು ಹೊಂದಿದ್ದು, ದೇಹವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ.
ಒಂದು ಲೋಟ ಹಾಲಿನಲ್ಲಿ ಬೆರೆಸುವ ಮೂಲಕ ಅಥವಾ ಸೇವಿಸುವ ಮತ್ತು ಬೇರೆ ಯಾವುದೇ ರೀತಿಯಲ್ಲಿ ಬಳಸಬಹುದು. ತ್ರಿಕಾಟು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ದೇಹದ ನೋವನ್ನು ಕಡಿಮೆ ಮಾಡುತ್ತದೆ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ
Show comments