ಈ ಸಮಸ್ಯೆಗಳಿಗೆ ಕೆಮ್ಮಣ್ಣಿನಲ್ಲಿದೆ ಪರಿಹಾರ

Webdunia
ಶನಿವಾರ, 11 ಮೇ 2019 (07:40 IST)
ಬೆಂಗಳೂರು : ಮಕ್ಕಳು ಮಣ್ಣಿನಲ್ಲಿ ಆಟವಾಡಿದರೆ ಅವರ ಕೈಕಾಲುಗಳಲ್ಲಿ ಗುಳ್ಳೆಗಳು ಆಗುತ್ತದೆ. ಆದ್ದರಿಂದ ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಲು ಬಿಡಬಾರದು ಎಂದು ಹೇಳುತ್ತಾರೆ. ಆದರೆ ಕೆಮ್ಮಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳಿವೆ ಎನ್ನಲಾಗಿದೆ.



ನಿಮ್ಮ ಮೈಮೇಲೆ ಸುಟ್ಟ ಕಲೆಗಳಿದ್ದರೆ ತಣ್ಣೀರಿನಲ್ಲಿ ಕೆಮ್ಮಣ್ಣನು ಕಲಸಿ ಚರ್ಮ ಸುಟ್ಟಿರುವ ಜಾಗಕ್ಕೆ ಲೇಪಿಸಿದರೆ ಉರಿ, ನೋವು ಕಡಿಮೆಯಾಗಿ ಗಾಯ ಬೇಗ ಗುಣವಾಗುತ್ತದೆಯಂತೆ. ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಾಗಿದ್ದರೆ ಕೆಮ್ಮಣ್ಣಿಗೆ ಮೊಸರು ಮತ್ತು ಪುದೀನಾ ಸೊಪ್ಪನ್ನು ಹಾಕಿ ಕಲಸಿ ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿದರೆ ಕಲೆಗಳು ಶಮನವಾಗುತ್ತದೆಯಂತೆ.

 

ಲೇಪಿಸಿ ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಚರ್ಮ ಮೃದುವಾಗುತ್ತದೆ. ಕೆಮ್ಮಣ್ಣಿಗೆ ರೋಸ್‌ವಾಟರ್‌ ಬೆರೆಸಿ ಕಣ್ಣಿನ ರೆಪ್ಪೆಗಳ ಮೇಲೆ ಮತ್ತು ಸುತ್ತಲೂ ಹಚ್ಚಿದರೆ ಕಣ್ಣಿನ ನೋವು ಕಡಿಮೆಯಾಗುತ್ತದೆ ಅಲ್ಲದೇ ಮುಖದ ಮೇಲೆ ಮೊಡವೆಗಳಾಗಿದ್ದರೆ ಬೇವಿನ ಪುಡಿ, ಅರಿಶಿನ ಪುಡಿ ಮತ್ತು ಕೆಮ್ಮಣ್ಣನ್ನು ರೋಸ್‌ ವಾಟರ್‌ ಜತೆ ಕಲಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ನಿವಾರಣೆಯಾಗುತ್ತವೆ. ಮಂಡಿಗಳು ಕೆಂಪಾಗಿ ಊತ, ನೋವಿದ್ದರೆ ಕೆಮ್ಮಣ್ಣಿಗೆ ಮೇಕೆ ಹಾಲನ್ನು ಕಲಸಿ ಪೇಸ್ಟ್‌ ಮಾಡಿ ಮಂಡಿಗಳ ಮೇಲೆ ಲೇಪಿಸಿದರೆ ಕೆಂಪು ಕಡಿಮೆಯಾಗಿ ಊತ, ನೋವು ಶಮನವಾಗುತ್ತದೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ಯಾಲ್ಸಿಯಂ ಕೊರತೆಯಿರುವವರು ಈ ಆಹಾರ ಕ್ರಮ ಅನುಸರಿಸಿ

ರಾತ್ರಿಯ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ, ತೂಕದಲ್ಲಿ ಬದಲಾವಣೆ ನೋಡಿ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಮುಂದಿನ ಸುದ್ದಿ
Show comments