Webdunia - Bharat's app for daily news and videos

Install App

ವೀಳ್ಯದೆಲೆ ಜಗಿದರೆ ಈ ರೋಗ ಬಾರದು!

Krishnaveni K
ಮಂಗಳವಾರ, 2 ಏಪ್ರಿಲ್ 2024 (11:49 IST)
WD
ಬೆಂಗಳೂರು: ವಿವಾಹಿತ ದಂಪತಿ ವೀಳ್ಯ ಹಾಕುವ ಸಂಪ್ರದಾಯ ನಮ್ಮಲ್ಲಿದೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲ. ವೀಳ್ಯ ಜಗಿಯುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಹಿಂದೂ ಸಂಪ್ರದಾಯದಂತೆ ಶುಭ ಕಾರ್ಯಗಳಿಗೆ ವೀಳ್ಯದೆಲೆಯನ್ನು ಬಳಸಲಾಗುತ್ತದೆ. ಇದು ಸುಮ್ಮನೇ ಅಲಂಕಾರಿಕ ವಸ್ತು ಮಾತ್ರವಲ್ಲ. ವೀಳ್ಯದೆಲೆಯಲ್ಲಿ ಅಪಾರ ಔಷಧೀಯ ಗುಣವಿದೆ. ಇದಕ್ಕಾಗಿಯೇ ವೀಳ್ಯದೆಲೆ ಜಗಿಯಬೇಕು ಎಂಬುದನ್ನು ಸಂಪ್ರದಾಯವನ್ನಾಗಿ ಮಾಡಿರಬಹುದು.

ವೀಳ್ಯದೆಲೆಯನ್ನು ಪ್ರತಿನಿತ್ಯ ಜಗಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ನಮ್ಮ ಆಹಾರದಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ರಾತ್ರಿ ಹೊತ್ತು ವೀಳ್ಯ ಜಗಿದರೆ ಪರಿಹಾರ ಸಿಗಲಿದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುವ ಗುಣ ಹೊಂದಿದೆ.

ಅಷ್ಟೇ ಅಲ್ಲ, ವೀಳ್ಯದೆಲೆಯಲ್ಲಿ ಜೀರ್ಣಕ್ರಿಯೆ ಸುಧಾರಿಸುವ ಗುಣವೂ ಇದೆ. ಅದೇ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ವೀಳ್ಯ ಜಗಿಯಲು ಹಿರಿಯರು ಹೇಳುತ್ತಾರೆ. ಆದರೆ ನೆನಪಿರಲಿ, ವೀಳ್ಯದ ಜೊತೆಗೆ ತಂಬಾಕು ಸೇವನೆ ಮಾಡಿದರೆ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಬ್ರಷ್ ಮಾಡುವ ಮೊದಲು ಕಾಫಿ ಕುಡಿಯುತ್ತೀರೆಂದರೆ ಇದನ್ನು ಓದಿ

ಒಣದ್ರಾಕ್ಷಿಯನ್ನು ನೆನೆಹಾಕಿ ಸೇವಿಸುವುದರ ಲಾಭ ತಿಳಿಯಿರಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮುಂದಿನ ಸುದ್ದಿ
Show comments