Publish Date: Tue, 08 Dec 2020 (10:10 IST)
Updated Date: Tue, 08 Dec 2020 (10:11 IST)
ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೆಲವರು ಧೂಮಪಾನ ಮಾಡುತ್ತಾರೆ. ಆದರೆ ಇದನ್ನು ಬಿಟ್ಟುಬಿಡಬೇಕೆಂದು ಕೆಲವರು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ವ್ಯಾಯಾಮ ಮಾಡಿ.
ವ್ಯಾಯಾಮವು ಮನಸ್ಥಿತಿ ಹೆಚ್ಚಿಸುವ ಎಂಡಾರ್ಫಿನ್ ಗಳ ಬಿಡುಗಡೆಗೆ ಕಾರಣವಾಗುತ್ತದೆ. ಒಳ್ಳೆಯ ವ್ಯಾಯಾಮವು ಕೆಲವೊಮ್ಮೆ ಸಿಗರೇಟುಗಳನ್ನು ತ್ಯಜಿಸುವ ಪ್ರಯತ್ನದ ಜೊತೆ ಕೆಟ್ಟ ಭಾವನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ವ್ಯಾಯಾಮಕ್ಕೆ ಅಂಟಿಕೊಳ್ಳುವುದು ಉತ್ತಮ.
ಆಯುರ್ವೇದದ ಪ್ರಕಾರ ಭಸ್ತ್ರಿಕಾ ಪ್ರಾಣಾಯಾಮದಂತಹ ನಿರ್ದಿಷ್ಟ ಉಸಿರಾಟದ ಅಭ್ಯಾಸದಿಂದ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿರುವ ಸಿಗರೇಟ್ ಹೊಗೆಯಂತಹ ಮಾಲಿನ್ಯಕಾರಕವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೇ ಅನೇಕ ಆಯುರ್ವೇದ ತಜ್ಞರು ದಿನಕ್ಕೆ 2 ಬಾರಿ ನೇತ್ರಿ ಕ್ರಿಯಯೋಗವನ್ನು ಮಾಡಲು ಧೂಮಪಾನವನ್ನು ತ್ಯಜಿಸಲು ನಿರ್ಧರಿಸಿದವರಿಗೆ ಸಲಹೆ ನೀಡುತ್ತಾರೆ.