ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಮೂರನೆಯ ಅಲೆ ಭೀತಿ, ಮೂರನೆಯ ಅಲೆಯು ಬಹುತೇಕ ಮಕ್ಕಳನ್ನು ಕಾಡುತ್ತಿದೆ ಎನ್ನವ ತಜ್ಞರ ವರದಿ, ಅದರಲ್ಲಿಯೂ ಅಪೌಷ್ಠಿಕ ಮಕ್ಕಳಲ್ಲಿ ಬಹುಬೇಗ ಸೋಂಕು ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ, ಈ ಮಧ್ಯೆ ಅಪೌಷ್ಠಿಕ ಮಕ್ಕಳಲ್ಲಿ ಪೌಷ್ಠಿಕತೆಗಾಗಿ ಸಾರವರ್ಧಿತ ಅಕ್ಕಿಯನ್ನು ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ, ಈ ಅಕ್ಕಿಯ ಅನ್ನವನ್ನು ಊಟ ಮಾಡಿದ ಅಪೌಷ್ಠಿಕ ಮಕ್ಕಳಲ್ಲಿ ಪೌಷ್ಠಿಕ ಪ್ರಮಾಣ ಹೆಚ್ಚಾದರೆ ಈ ಅಕ್ಕಿಯನ್ನು ದೇಶದಾದ್ಯಂತ ನೀಡುವ ಉದ್ದೇಶವಿದೆ, ಈ ಕಾರಣಕ್ಕೆ ಕೊಪ್ಪಳ ತಾಲೂಕಿನ ಬಹದ್ದೂರು ಬಂಡಿಯಲ್ಲಿ ವಿಶೇಷವಾದ ಸಾರವರ್ಧಿತ ಅಕ್ಕಿಯನ್ನು ವಿತರಿಸಿದ್ದು, ಇದು ದೇಶದಲ್ಲಿಯೇ ಮೊದಲು ಎನ್ನಲಾಗಿದೆ.