Select Your Language

Notifications

webdunia
webdunia
webdunia
webdunia

ಮೋದಿ ಹೆಸರು ಹೇಳದೇ ಚುನಾವಣೆ ಮಾಡಲಿ ಎಂದೋರಾರು?

ಮೋದಿ ಹೆಸರು ಹೇಳದೇ ಚುನಾವಣೆ ಮಾಡಲಿ ಎಂದೋರಾರು?
ಹುಬ್ಬಳ್ಳಿ , ಶುಕ್ರವಾರ, 5 ಏಪ್ರಿಲ್ 2019 (17:30 IST)
ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳದೇ ಬಿಜೆಪಿ ಅಭ್ಯರ್ಥಿ ಎಲೆಕ್ಷನ್ ಮಾಡಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಸವಾಲು ಹಾಕಿದ್ದಾರೆ.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಸವಾಲೆಸೆದಿದ್ದಾರೆ ಮಾಜಿ ಸಚಿವ ವಿನಯ ಕುಲಕರ್ಣಿ.
ಪ್ರಹ್ಲಾದ್ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದರಾಗಿದ್ದಾರೆ.
ವಿನಯ ಕುಲಕರ್ಣಿ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸವಾಲು ಹಾಕಿದ ವಿನಯ್ ಕುಲಕರ್ಣಿ, ಮೋದಿ ಮಂತ್ರ ಪಠಿಸೋದನ್ನ ಬಿಟ್ಟು ವೈಯಕ್ತಿಕವಾಗಿ ಕಣಕ್ಕಿಳಿಯಲಿ. ಚುನಾವಣೆಯಲ್ಲಿ ಮೋದಿಯನ್ನು ಬಿಟ್ಟು ನೇರವಾಗಿ ಸ್ಪರ್ಧೆ ಆಗಲಿ. ವಿನಯ ಕುಲಕರ್ಣಿ V/s ಪ್ರಹ್ಲಾದ ಜೋಶಿ ಸ್ಪರ್ಧೆಯಾಗಲಿ ಎಂದರು. ಮೋದಿ ಹೆಸರನ್ನು ಬಿಟ್ಟು ನಮ್ಮಿಬ್ಬರ ನಡುವೆ ಚುನಾವಣೆಯಾಗಲಿ ಎಂದು ಸವಾಲು ಹಾಕಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಸೆರೆಸಿಕ್ಕ ಖದೀಮರು ಏನ್ಮಾಡ್ತಿದ್ರು ಗೊತ್ತಾ?