Webdunia - Bharat's app for daily news and videos

Install App

ಸುಮಲತಾ ಟೂರಿಂಗ್ ಟಾಕೀಸ್ 18 ಕ್ಕೆ ಬಂದ್ !

Webdunia
ಮಂಗಳವಾರ, 2 ಏಪ್ರಿಲ್ 2019 (17:32 IST)
ಅಂಬರೀಶ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕ್ ಮನೆ ಕೊಡಿಸ್ಲಿಲ್ಲ. ಚುನಾವಣೆ ಬಳಿಕ ಸುಮಕ್ಕನೂ ಇರಲ್ಲ, ಪಮಕ್ಕನೂ ಇರಲ್ಲ ಅಂತ ಸಂಸದರೊಬ್ಬರು ವ್ಯಂಗ್ಯವಾಡಿದ್ದಾರೆ.

ಸುಮಲತಾ ವಿರುದ್ಧ ಮತ್ತೆ ಮಾತು ಮುಂದುವರೆಸಿದ ಸಂಸದ ಎಲ್. ಆರ್. ಶಿವರಾಮೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್  ಸಭೆಯಲ್ಲಿ ಸುಮಲತಾ ವಿರುದ್ಧ ಮಾತಿನ ಬಾಣ ಹರಿಬಿಟ್ಟರು. 

ಆಗ ಗೌರಮ್ಮನ ಹಾಗೆ ಮನೆಲಿದ್ಬುಟ್ಟು, ಅಂಬರೀಶ್ ಸತ್ತಾಗ ಕುಮಾರಸ್ವಾಮಿಗೆ ಬುದ್ದಿ ಇಲ್ಲದೆ ಮಂಡ್ಯಗೆ ತಂದ ಟೈಂ ನಲ್ಲಿ ಜನ ನೋಡುದ್ರಲ್ಲಾ. ಓ ಹೋ ಇವರೆಲ್ಲಾ ಓಟ್ ಹಾಕ್ತಾರೆ ಅಂತ. ಇದು ಫೀಲ್ಮಿ ಸ್ಟೈಲ್ ನಲ್ಲಿ ನಡೀತಿದೆ ಎಂದ್ರು.

ಸುಮಲತಾ ಟೂರಿಂಗ್ ಟಾಕೀಸ್ ಹದಿನೆಂಟನೇ ತಾರೀಖಿನವರೆಗೂ ನಡೆಯುತ್ತೆ ಶೂಟಿಂಗ್. ಆ ಮೇಲೆ ಸುಮಕ್ಕನೂ ಇಲ್ಲ ಪಮಕ್ಕಾನೂ ಇಲ್ಲ ಎಂದು ಟಾಂಗ್ ನೀಡಿದ್ರು.

ಆ ಮೇಲೆ ಅವರನ್ನ ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡಕಲು ಹೋಗ್ತಿರಾ ಹೇಳಿ ಅಂತ ಜನರನ್ನು ಕೇಳಿದ್ರು.
ಈ ಟೂರಿಂಗ್ ಟಾಕೀಸ್ ನವರ ಹದಿನೆಂಟನೆ ತಾರೀಖು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಸಿನಿಮಾ ಎಲ್ಲವೂ ಬಿಡುಗಡೆ ಆಗಲ್ಲ. ಹಾಗೆಯೇ ಇದು. ಇವತ್ತು ದರ್ಶನ್ ಬಂದವನಲ್ಲ. ಇವನೂ ನಾಯ್ಡು. ಸುಮಲತಾ ನಾಯ್ಡು. ಲೇ ಗೌಡ್ರು ಕತೆ ಏನಾಗಬೇಕ್ರೊ ಎಂದು ಕೇಳಿದ್ರು.

ನಾಯ್ಡುಗಳ ಮಯವನ್ನ  ಮಂಡ್ಯದಲ್ಲಿ ಮಾಡಲು ಬಿಡಬಾರದು ಎಂದು ಟೀಕೆ ಮಾಡಿದ್ರು. ಅವಳ ಗಂಡನ ನಂಬಿಕೊಂಡೆ 20 ವರ್ಷ ಹಾಳು ಮಾಡ್ಕೊಂಡೆ ನಾನು ಎಂದ ಅವರು, 20 ವರ್ಷ ಅಧಿಕಾರದಿಂದ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದಿದ್ದೇ ಕಾರಣ ಎಂದೂ ಟೀಕೆ ಮಾಡಿದ್ರು.

ಅಮರಾವತಿ ಚಂದ್ರಶೇಖರ್ ಅವರ ಮನೇಲಿ ಅಡುಗೆ ಮಾಡಿ ಹಾಕಿ ಹಾಕಿ ಸೋತೋಗಿದ್ದಾರೆ ಎಂದೂ ಟೀಕೆ ಮಾಡಿದ್ರು. ಸುಮಲತಾ  ಮಂಡ್ಯದ ಗೌಡತಿ ಅಲ್ಲ  ಎಂದು ಪದೇ ಪದೇ ಶಿವರಾಮೇಗೌಡ ಹೇಳಿದ್ರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments