Select Your Language

Notifications

webdunia
webdunia
webdunia
webdunia

ರಾಜಕೀಯ ಬಿಡ್ತೀನಿ ಎಂದ ಸಚಿವ ತಮ್ಮಣ್ಣ

ರಾಜಕೀಯ ಬಿಡ್ತೀನಿ ಎಂದ ಸಚಿವ ತಮ್ಮಣ್ಣ
ಮಂಡ್ಯ , ಸೋಮವಾರ, 1 ಏಪ್ರಿಲ್ 2019 (17:51 IST)
ಚುನಾವಣೆ ಸಮಯದಲ್ಲಿನ ಪ್ರಚಾರದ ವೇಳೆ ನಾನು ರಾಜಕೀಯ ಬಿಟ್ಟುಬಿಡ್ತೀನಿ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ನಿಖಿಲ್ ಪ್ರಚಾರ ಸಭೆಯಲ್ಲಿ ಸಚಿವ ತಮ್ಮಣ್ಣ ಹೇಳಿಕೆ ನೀಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಕೇವಲ 9 ತಿಂಗಳಿಗೆ 8700 ಕೋಟಿ ಹಣ ಕೊಟ್ಟಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿ ಆದರೂ ಒಂದು ಸಾವಿರ ಕೋಟಿ ಮೀರಿ ಯಾವ ಜಿಲ್ಲೆಗಾದ್ರೂ ಹಣ ಕೊಟ್ಟಿದ್ದಾರಾ? ಹಾಗೊಂದು ವೇಳೆ ಕೊಟ್ಟಿರೋ ಇತಿಹಾಸ ಇದ್ರೆ ನಾನು ರಾಜಕೀಯ ಬಿಟ್ಬಿಡ್ತೀನಿ. ಹೀಗಂತ ಸಚಿವ ತಮ್ಮಣ್ಣ ಹೇಳಿದ್ರು.

ಮೊಸಳೆ ಕಣ್ಣೀರು ಹಾಕ್ತಾ, ಋಣ ಇದೆ ಅಂತಾರೆ. ಮಂಡ್ಯ ಜಿಲ್ಲೆಗೆ ಇವ್ರು ಏನು ಋಣ ತೀರಿಸಿದ್ದಾರೆ? ನಿಮ್ಮ ಋಣ ಎಲ್ಲರ ಮೇಲಿದೆ. ಎಷ್ಟು ಜನ ನಿಮ್ಮ ಋಣ ತೀರಿಸಿದ್ದಾರೆ? ಋಣ ಇದೆ ಅಂದೋರಿಗೆ ತಕ್ಕ ಉತ್ತರ ಕೊಡಿ ಅಂತಾ ಸುಮಲತಾ ಹೆಸರೇಳದೇ ತಮ್ಮಣ್ಣ ವಾಗ್ದಾಳಿ ನಡೆಸಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಅಧಿಕಾರಕ್ಕೆ ಬಂದ್ರೆ ದೇಶ ಉಳಿಯುತ್ತೋ, ಇಲ್ವೋ? ಎಂದವರಾರು?